ಸುದ್ದಿ ಕಣಜ.ಕಾಂ
ನವದೆಹಲಿ: ಕೋವಿಡ್ ಹಿನ್ನೆಲೆ ಅವಕಾಶ ವಂಚಿತ ಅಭ್ಯರ್ಥಿಗಳ ಹಿತ ಮನಗಂಡು ಕೇಂದ್ರ ಸರ್ಕಾರ ಮತ್ತೊಂದು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ ಬರೆಯಲು ಷರತ್ತುಬದ್ಧ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ವಯೋಮಿತಿ ಮೀರುವವರಿಗೆ ಮಾತ್ರ ಅವಕಾಶ | 2020ರ ಪರೀಕ್ಷೆಯೇ ಕೊನೆಯ ಅವಕಾಶವಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಒಂದು ಹೆಚ್ಚುವರಿ ಅವಕಾಶ ಕಲ್ಪಿಸಲಾಗುತ್ತಿದೆ. ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠಕ್ಕೆ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ । ಹುಣಸೋಡು ಬ್ಲಾಸ್ಟ್, ಮತ್ತೆ ನಾಲ್ವರು ಅರೆಸ್ಟ್, ಹೇಗೆ ನಡೀತು ಪೊಲೀಸ್ ಕಾರ್ಯಾಚರಣೆ?
ಫೆಬ್ರವರಿ 8ರಂದು ಈಕುರಿತು ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸಿದೆ.
2021ನೇ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ಅವಕಾಶ ನೀಡಲಾಗುತ್ತಿದೆ. ಒಂದು ಸಲ ಚಾನ್ಸ್ ನೀಡುತ್ತಿರುವುದರಿಂದ ಅಂದಾಜು 3,300 ಅಭ್ಯರ್ಥಿಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ.