ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಒಂದು ವರ್ಷ ಒಂದು ತಿಂಗಳ ಮಗುವೊಂದು ಅಡಕೆ ನುಂಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಹೆದ್ದೂರು ಗ್ರಾಮದಲ್ಲಿ ಅಡಕೆ ನುಂಗಿದ ಮಗು ಉಸಿರುಗಟ್ಟಿ ಮೃತಪಟ್ಟಿದೆ.
ಸಂದೇಶ್ ಮತ್ತು ಅರ್ಚನಾ ದಂಪತಿಯ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಹಿನ್ನೆಲೆ ತೀರ್ಥಹಳ್ಳಿಗೆ ಆಗಮಿಸಿದ್ದರು. ಇನ್ನೇನು ಮಗುವಿನೊಂದಿಗೆ ಬೆಂಗಳೂರಿಗೆ ವಾಪಸ್ ತೆರಳಬೇಕಿತ್ತು. ಅಷ್ಟರಲ್ಲಿಯೇ ಈ ಘಟನೆ ನಡೆದಿದೆ.
ಆರೋಗ್ಯವಂತ ಸ್ಪರ್ಧೆಯಲ್ಲಿ ಫಸ್ಟ್ | ಆರೋಗ್ಯ ಇಲಾಖೆಯು ಆಯೋಜಿಸಿದ್ದ ಶಿಶು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಆರೋಗ್ಯವಂತ ಮಗು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕೂಡ ಗಳಿಸಿತ್ತು.