ಸುದ್ದಿ ಕಣಜ.ಕಾಂ
ಶಿವಮೊಗ್ಗ: ಉಂಬ್ಳೇಬೈಲು ಸುತ್ತ ಕೃಷಿ ಭೂಮಿಗಳಿಗೆ ನುಗ್ಗಿ ಅಡಕೆ, ತೆಂಗು ಮತ್ತಿತರ ಬೆಳೆಗಳನ್ನು ಹಾನಿ ಮಾಡುತ್ತಿದ್ದ ಮೂರು ಆನೆಗಳನ್ನು ಯಶಸ್ವಿಯಾಗಿ ಭದ್ರಾ ಅಭಯಾರಣ್ಯಕ್ಕೆ ಅಟ್ಟಲಾಗಿದೆ. ಆದರೆ, ಈ ಕಾರ್ಯಾಚರಣೆಯಲ್ಲಿ ಕಾಡಾನೆಗಳ ಚಾಣಾಕ್ಷತನವನ್ನು ಮೆಚ್ಚಲೇಬೇಕು!
ಬುಧವಾರ ಬೆಳಗ್ಗೆ ಶುರುವಾದ ಕಾರ್ಯಾಚರಣೆ ಸಂಜೆಯ ಹೊತ್ತಿಗೆ ಫಲಪ್ರದವಾಗಿತ್ತು. ಆದರೆ, ಆನೆಗಳು ವಾಪಸ್ ಬರಬಹುದು ಎಂಬ ಕಾರಣಕ್ಕೆ ಎರಡು ದಿನ ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆಬಿಡಾರ ಸಿಬ್ಬಂದಿ ನಿರಂತರ ಕೋಂಬಿಂಗ್ ಮಾಡಿದ್ದರು. ಆದರೆ, ಆನೆಗಳ ಚಲನವಲನ ಕಾಣದೇ ಇದ್ದುದ್ದರಿಂದ ಶುಕ್ರವಾರ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು.
ಇದನ್ನೂ ಓದಿ । ಇಂದು ಮಧ್ಯಾಹ್ನ ಆಪರೇಷನ್ ಸಲಗ ಫಿನಿಷ್
ಕಾಡಾನೆಗಳ ಬುದ್ಧಿವಂತಿಕೆ | ಗಂಡು, ಹೆಣ್ಣು ಮತ್ತು ಮರಿ ಸೇರಿ ಮೂರು ಕಾಡಾನೆಗಳು ತಮ್ಮ ಮೂಲಸ್ಥಾನ ತೊರೆದು ಉಂಬ್ಳೇಬೈಲು ಪ್ರವೇಶಿಸಿದ್ದವು. ಅಕ್ಕಪಕ್ಕ ಉಪಟಳ ಸಹ ನೀಡುತ್ತಿದ್ದವು. ಇದರಿಂದ ಬೇಸತ್ತ ಜನ ಹಲವು ದೂರು ನೀಡಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಕಾಡಾನೆಗಳನ್ನು ಅವುಗಳ ಮೂಲಸ್ಥಾನಕ್ಕೆ ತಲುಪಿಸುವ ಕಾರ್ಯಾಚರಣೆ ಮಾಡಿದರು.
ವಿಶೇಷವೆಂದರೆ, ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ಯಾವ ಮಾರ್ಗದ ಮೂಲಕ ಉಂಬ್ಳೇಬೈಲು ಪ್ರವೇಶಿಸಿದ್ದವೋ ಅದೇ ದಾರಿ ಹಿಡಿದು ಮೂಲ ಸ್ಥಾನಕ್ಕೆ ಹೋಗಿದ್ದು ಸೋಜಿಗ ಮೂಡಿಸಿತ್ತು.