ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೆಳಗಾವಿ ಕರ್ನಾಟಕದ್ದೇ. ಆ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಮರಾಠ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತ ಪಡಿಸುವುದು ಸರಿಯಲ್ಲ ಎಂದು ಕ್ಷತ್ರೀಯ ಮರಾಠ ಮೀಸಲಾತಿ ಅಭಿಯಾನದ ಅಧ್ಯಕ್ಷ ಪಿ.ವಿಜೇಂದ್ರ ಜಾಧವ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನ ಸ್ವಾಗತಾರ್ಹ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ನಿರ್ಧಾರ ಹಿಂಪಡೆಯಬಾರದು ಎಂದು ಹೇಳಿದರು.
ಪ್ರಾಧಿಕಾರದಿಂದಾದ ಅನ್ಯಾಯವೇನು ತಿಳಿಸಿ | ಬೆಳಗಾವಿಯಲ್ಲಿ ಮರಾಠಿಗರೇ ಬಹುಸಂಖ್ಯಾತರಿದ್ದಾರೆ. ವಿಧಾನ ಸಭೆಯ 32 ಕ್ಷೇತ್ರಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಒಬ್ಬ ಮರಾಠಿಗರು ಆಯ್ಕೆಯಾಗಿಲ್ಲ. ಪ್ರಾಧಿಕಾರ ರಚನೆಯಿಂದ ಕನ್ನಡ ನಾಡಿಗೆ ಯಾವ ಅನ್ಯಾಯವಾಗಿದೆ ಎಂದು ವಿರೋಧಿಸುತ್ತಿರುವವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರುರಾವ್ ಗಾರ್ಗೆ, ಭವಾನಿರಾವ್ ಮೋರೆ, ರಮೇಶ್ ಬಾಬು ಜಾಧವ್, ದಿನೇಶ್ ಚವ್ಹಾಣ್, ಚೂಡಾಮಣಿ ಪವಾರ್ ಉಪಸ್ಥಿತರಿದ್ದರು.