ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ಬಳಿಕ ತೆರೆ ಕಂಡಿರುವ ವಾಣಿಜ್ಯ ಚಿತ್ರ ‘ರಾಮಾರ್ಜುನ’. ರಾಜ್ಯದಾದ್ಯಂತ ಜನವರಿ 29ರಂದು ತೆರೆಕಂಡಿರುವ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿವಮೊಗ್ಗದಲ್ಲೂ ಉಳಿದೆಡೆಗಿಂತ ಭಿನ್ನ ಹಾಗೂ ಹೆಚ್ಚು ಜನ ವೀಕ್ಷಿಸಲು ಬಂದಿದ್ದಾರೆ.
ನಾಗಾರ್ಜನ ಚಿತ್ರತಂಡ ಸೋಮವಾರ ಶಿವಮೊಗ್ಗಕ್ಕೆ ಬಂದಿದ್ದು, ಅಭಿಮಾನಿಗಳೊಂದಿಗೆ ಕೆಲಹೊತ್ತು ಕಳೆದರು. ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದರು. ಭಾರತ್ ಸಿನಿಮಾಸ್ ನಲ್ಲಿ ಫ್ಯಾನ್ಸ್ ಜತೆ ಕುಳಿತು ಚಿತ್ರ ವೀಕ್ಷಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರದ ನಾಯಕ ನಟ ಅನೀಶ್ ತೇಜೇಶ್ವರ್, ನಟಿ ನಿಷ್ವಿಕ್ ನಾಯ್ಡು ಶಿವಮೊಗ್ಗ ಜನತೆಯನ್ನು ಮುಕ್ತ ಕಂಠದಿಂದ ಹೊಗಳಿದರು. ಕನ್ನಡ ಸಿನಿಮಾಗಳಿಗೆ ಶಿವಮೊಗ್ಗದವರು ಸದಾ ಬೆಂಬಲಿಸುತ್ತಲೇ ಬಂದಿದ್ದಾರೆ. ಅದಕ್ಕೆ ಥ್ಯಾಂಕ್ಸ್ ಹೇಳಿದರು.
ಕೊರೊನಾದಿಂದಾಗಿ ಸಿನಿಮಾ ನೋಡಲು ಬರುತ್ತಾರಾ ಎಂಬ ಭಯ ಇತ್ತು. ಆದರೆ, ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ. ಅದರಲ್ಲಿ ಶಿವಮೊಗ್ಗ ಮೇಲಿದೆ. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.