ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಟ್ಕಾ, ಜೂಜಾಟ ಬರೆಯುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂವರನ್ನು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ 42,850 ರೂಪಾಯಿ ಜಪ್ತಿ ಮಾಡಲಾಗಿದೆ.
ಯಲವಟ್ಟಿ ಸರ್ಕಲ್ನ ಸಾರ್ವಜನಿಕ ಸ್ಥಳದಲ್ಲಿ
ಶಿವಮೊಗ್ಗ ನಗರ ನಿವಾಸಿ ರಾಘವೇಂದ್ರ (36) ಎಂಬಾತನಿಂದ 15,090 ರೂಪಾಯಿ ನಗದು ಹಣ ಹಾಗೂ ಓಸಿ ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ನಗರದ ಸುರೇಶ್ (42) ಎಂಬಾತನಿಂದ 17,140 ರೂಪಾಯಿ ಹಾಗೂ ಶಾಂತಿನಗರ ಚಾನೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಡ್ಯಾನಿಯಲ್ ಅಲಿಯಾಸ್ ಡ್ಯಾನಿ (40) 10,620 ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ | ಡಿಎಸ್.ಬಿ ವಿಭಾಗ ಪೊಲೀಸ್ ನಿರೀಕ್ಷಕ ಕುಮಾರಸ್ವಾಮಿ ಸಿಬ್ಬಂದಿ ಹಾಲಪ್ಪ, ಸತೀಶ್ ರಾಜ್, ಮಂಜುನಾಥ್, ಚಂದ್ರಾನಾಯ್ಕ್, ಸಮೀವುಲ್ಲಾ, ವಸಂತ ಅವರನ್ನು ಒಳಗೊಂಡ ಡಿಸಿಐಬಿ ತಂಡವು ಕಾರ್ಯಾಚರಣೆ ನಡೆಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.