ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, ಜಿಲ್ಲಾ ಘಟಕಗಳ ಅಧ್ಯಕ್ಷರ, ಗಡಿನಾಡ ಘಟಕಗಳ ಅಧ್ಯಕ್ಷರ (ಕಾರ್ಯಕಾರಿ ಸಮಿತಿ ಸದಸ್ಯರ) ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವೇಳಾಪಟ್ಟಿ
- 08-02-2021 | ಜಿಲ್ಲಾವಾರು ಮತದಾರ ಸದಸ್ಯರ ಕರಡು ಪಟ್ಟಿ ಪ್ರಕಟಣೆ
- 22-02-2021 | ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆಗಳನ್ನು ಸ್ವೀಕರಿಸಲು ಕೊನೆಯ ದಿನ
- 25-03-2021 | ಮತದಾರರ ಅಂತಿಮ ಪಟ್ಟಿ ಪ್ರಕಟಣೆ
- 29-03-2021 ರಿಂದ 07-04-2021 | ನಾಮಪತ್ರಗಳನ್ನು ಸ್ವೀಕರಿಸುವುದು, ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ.
- 07-04-2021 | ನಾಮಪತ್ರಗಳ ಸ್ವೀಕಾರದ ಕೊನೆಯ ದಿನ
- 008-04-2021 | ನಾಮಪತ್ರಗಳ ಪರಿಶೀಲನೆ
- 12-04-2021 | ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ
- 12-04-2021 | ಅಭ್ಯರ್ಥಿಗಳ ಅಂತಿಮ ಪಟ್ಟಿಯ ಪ್ರಕಟಣೆ
- 23-04-2021 | ಗಡಿನಾಡ/ ಹೊರನಾಡ ಮತದಾರರಿಗೆ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಿಂದ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳ ರವಾನೆಗೆ ಅಂತಿಮ ದಿನ
- 09-05-2021 | ಮತದಾನ ಅವಶ್ಯವಿದ್ದರೆ
- 09-05-2021 | ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ
- 11-05-2021 | ಗಡಿನಾಡ/ ಹೊರನಾಡ ಮತದಾರರು ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳನ್ನು ಕಳುಹಿಸುವ ದಿನಾಂಕ
- 12-05-2021 | ಗಡಿನಾಡ ಘಟಕಗಳ ಹಾಗೂ ಪರಿಷತ್ತಿನ ಅಧ್ಯಕ್ಷರ ಚುನಾವಣೆಯ ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ
ನಿಬಂಧನೆಗಳು | ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಂತೆ ಚುನಾವಣೆ ನಡೆಯುವ ತಾರೀಕಿಗೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಹಿಂದಿನ 10 ವರ್ಷಗಳಿಂದಲೂ ಜಿಲ್ಲಾ/ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಹಿಂದಿನ 5 ವರ್ಷಗಳಿಂದಲೂ ಹಾಗೂ ಮತದಾರರು ಹಿಂದಿನ 3 ವರ್ಷಗಳಿಂದಲೂ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು.
ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 1000 ರೂಪಾಯಿಗಳ ಠೇವಣಿ, ಜಿಲ್ಲಾ/ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ 500 ರೂ.ಗಳ ಠೇವಣಿಯನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಗದಾಗಿ ಪಾವತಿಸಿ ಮೂಲ ರಶೀತಿಯನ್ನು ನಾಮಪತ್ರದೊಂದಿಗೆ ಸಲ್ಲಿಸುವುದು.
ಚುನಾವಣೆಯಲ್ಲಿ ಚಲಾಯಿಸಲಾದ ಒಟ್ಟು ಕ್ರಮಬದ್ಧ ಮತಗಳಲ್ಲಿ ಕನಿಷ್ಠ 1/6 ಭಾಗದಷ್ಟು ಮತಗಳನ್ನು ಪಡೆದವರಿಗೆ ಮಾತ್ರ ಠೇವಣಿ ಹಣವನ್ನು ಹಿಂದಿರುಗಿಸಲಾಗುವುದು.
ಮತದಾರರ ಅಂತಿಮ ಪಟ್ಟಿ ಪ್ರಕಟಣೆಯ ನಂತರ ನಾಮಪತ್ರಗಳ ನಮೂನೆಗಳನ್ನು ಮತ್ತು ಮತದಾರರ ಪಟ್ಟಿಯನ್ನು ನಗದಿಪಡಿಸಿರುವ ಬೆಲೆಗೆ ಪರಿಷತ್ತಿನ ಕೇಂದ್ರ ಕಚೇರಿಯಿಂದ ಜಿಲ್ಲಾ ಕೇಂದ್ರ ತಾಲೂಕು ತಹಸೀಲ್ದಾರರಿಂದ ಪಡೆಯಬಹುದೆಂದು ಕೇಂದ್ರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆರೆ.