ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಪ್ರಕರಣದಲ್ಲಿ ಬಂಧನಕ್ಕೆ ಒಳಪಡುತ್ತಿರುವವ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. 9ನೇ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ | ಮತ್ತೆ ನಾಲ್ವರು ಅರೆಸ್ಟ್, ಪ್ರಕರಣಕ್ಕೆ ಆಂಧ್ರದ ಲಿಂಕ್
ಅನಂತಪುರಂನ ರಾಯದುರ್ಗದಲ್ಲಿ ಪೃಧ್ವಿರಾಜ್ ಸಾಯಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರ ಪ್ರದೇಶದ ಅನಂತಪುರಂನಲ್ಲಿ ಪಿ.ಶ್ರೀರಾಮಲು ಮತ್ತು ಆತನ ಮಗ ಪಿ.ಮಂಜುನಾಥ್ ಸಾಯಿ ಎಂಬುವವರನ್ನು ಈ ಹಿಂದೆಯೇ ಬಂಧಿಸಲಾಗಿದೆ. ಈಗ ಶ್ರೀರಾಮಲು ಅವರ ಮತ್ತೊಬ್ಬ ಪುತ್ರನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ರಾಯದುರ್ಗದಲ್ಲಿ ಶ್ರೀರಾಮಲು ಎಂಬಾತನ ಸ್ಫೋಟಕಗಳ ದಾಸ್ತಾನು ಗೋದಾಮು ಇದೆ. ಅಲ್ಲಿಂದಲೇ ಹುಣಸೋಡು ಗ್ರಾಮಕ್ಕೆ ಸ್ಫೋಟಕಗಳು ಪೂರೈಕೆಯಾಗಿವೆ.