ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸೂಪರ್ ಮಾರ್ಕೆಟ್ ವೊಂದರಲ್ಲಿ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಗಿರಿ ತಾಲೂಕಿನ ಉದಯ್ ಕುಮಾರ್ (29) ಎಂಬಾತನೇ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ । ಲವ್ ಮ್ಯಾರೇಜ್ ಆದ ಒಂದೂವರೆ ವರ್ಷದೊಳಗೆ ಪತ್ನಿಯ ಕೊಲೆ
ಹೊಸ ವರ್ಷದಂದೇ ಕಳ್ಳತನ | ಜನರೆಲ್ಲ ಹೊಸ ವರ್ಷಾಚರಣೆಯಲ್ಲಿದ್ದಾಗ ಈತ ಸೂಪರ್ ಮಾರ್ಕೆಟಿನ ಕಿಟಕಿಯ ಗಾಜು ಒಡೆದು ಒಳಗೆ ಪ್ರವೇಶಿಸಿ ಅಂದಾಜು 3.85 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಉದಯ್ ಕುಮಾರ್ ಕಡೆಯಿಂದ 1.80 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ಮಾಡಿದ ತಂಡ | ಆರೋಪಿ ಪತ್ತೆಗೆ ಡಿವೈಎಸ್.ಪಿ ಉಮೇಶ್ ನಾಯ್ಕ, ದೊಡ್ಡಪೇಟೆ ಸಿಪಿಐ ವಸಂತ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್.ಐ ಮಂಜಮ್ಮ, ಸಿಬ್ಬಂದಿ ರಮೇಶ್, ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.