ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಪಟ್ಟಣ ಪಂಚಾಯಿತಿಯ ಹೊಸ ಟ್ರಾಕ್ಟರ್ನ ಎಂಜಿನ್ ಕದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು | ಶಿಕಾರಿಪುರದ ಮಂಜುನಾಥ್(29), ಹರೀಶ್(21), ನಾಗಭೂಷಣ್(33) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಿರಾಳಕೊಪ್ಪದ ಜಲ ಶುದ್ಧೀಕರಣ ಘಟಕ ಸಮೀಪ ನಿಲ್ಲಿಸಿದ್ದ ಟ್ರಾಕ್ಟರ್ ಎಂಜಿನ್ ಕಳವು ಮಾಡಲಾಗಿತ್ತು. ಜನವರಿ 30ರಂದು ಈ ಘಟನೆ ನಡೆದಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ಮಾಡಿದ ತಂಡ | ಅಂದಾಜು ಐದೂವರೆ ಲಕ್ಷ ರೂಪಾಯಿ ಮೌಲ್ಯದ ಎಂಜಿನ್ ಕಳ್ಳತನ ಮಾಡಿದ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಯಿತ್ತು. ಡಿವೈಎಸ್.ಪಿ ಶಿವಾನಂದ್ ಮದರಕಂಡಿ, ಇನ್ಸ್ ಪೆಕ್ಟರ್ ಗುರುರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ ರಮೇಶ್, ಸಿಬ್ಬಂದಿ ಕೊಟ್ರೇಶಪ್ಪ, ಆದರ್ಶ, ಮಂಜುನಾಥ್ ಇತರರು ಇದ್ದರು.