ಸುದ್ದಿ ಕಣಜ.ಕಾಂ
ಶಿವಮೊಗ್ಗ: ಡಕಾಯಿತಿ ಮಾಡುವುದಕ್ಕಾಗಿಯೇ ಅನುಪಿನಕಟ್ಟೆ ಸಮೀಪ ಹೊಂಚು ಹಾಕಿದ್ದ ಮೂವರನ್ನು ತುಂಗಾನಗರ ಪೊಲೀಸರು ಶುಕ್ರವಾರ ಬಂಧಿಸಿ, ಅವರಿಂದ ಮಾರಕಾಸ್ತ್ರ, ಬೈಕ್ ವಶಕ್ಕೆ ಪಡೆದಿದ್ದಾರೆ.
ಬಂಧಿತರು | ತುಂಗಾನಗರದ ತಬರಾಕುಲ್ಲ ಅಲಿಯಾಸ್ ತಪ್ಪಣ್ಣ, ಕಡ್ಡಿ ಮತ್ತು ಅಸ್ಲಾಂ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ತುಂಗಾನಗರ ಎಸ್.ಐ. ತಿರುಮಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದೆ. ಪೊಲೀಸರು ದಾಳಿ ಮಾಡಿದ್ದನ್ನು ಗಮನಿಸಿ ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತರಲ್ಲಿ ತಪ್ಪಣ್ಣ ಎಂಬಾತನ ಮೇಲೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಹಿನ್ನೆಲೆ ಇದೆ. ಇನ್ನುಳಿದವರ ಮೇಲೆ ಪ್ರಕರಣಗಳಿಲ್ಲ. ಆರೋಪಿಗಳಿಂದ ಮಾರಕಾಸ್ತ್ರ, ಬೈಕ್, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.