ಸುದ್ದಿ ಕಣಜ.ಕಾಂ
ಶಿಕಾರಿಪುರ: ಬಣ ರಾಜಕೀಯ ಗ್ರಾಮ ಪಂಚಾಯಿತಿಗೂ ಒಕ್ಕರಿಸಿಕೊಂಡಿದೆ. ಹೊಸೂರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಸದಸ್ಯರ ನಡುವೆ ಬಣ ರಾಜಕೀಯ ಭುಗಿಲೆದ್ದು ಚುನಾವಣೆಯನ್ನೇ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ.
ಹೊಸೂರು ಪಂಚಾಯಿತಿಯಲ್ಲಿ 11 ಸದಸ್ಯ ಬಲವಿದ್ದು, ಲಕ್ಷ್ಮಿ ಕರಿಬಸಪ್ಪ ಮತ್ತು ಹನುಮಕ್ಕ ಅವರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದರು. ಲಕ್ಷ್ಮಿ 6 ಹಾಗೂ ಹನುಮಕ್ಕ 5 ಮತಗಳನ್ನು ಪಡೆದರು. ಅಧಿಕ ಮತ ಪಡೆದವರ ಹೆಸರು ಘೋಷಿಸುತ್ತಿದ್ದಂತೆಯೇ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ, ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇದನ್ನೂ ಓದಿ । ಹತ್ತು ಮಹಾನಗರ ಪಾಲಿಕೆಗಳ ಮೀಸಲು ಪ್ರಕಟ, ಯಾವ ಪಾಲಿಕೆಗೆ ಯಾವ ಕೆಟಗರಿ, ಇಲ್ಲಿದೆ ಮಾಹಿತಿ
ಏನಿದು ಬಣ ರಾಜಕೀಯ | ಒಟ್ಟು 11 ಸ್ಥಾನಗಳಲ್ಲಿ ಏಳು ಬಿಜೆಪಿ ಬೆಂಬಲಿತ, ನಾಲ್ಕು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಒಂದು ಬಣ ಹನುಮಕ್ಕನವರ ಆಯ್ಕೆಗೆ ನಿರ್ಣಯಕೈಗೊಂಡಿದ್ದಾರೆ. ಅದರ ಮಧ್ಯೆ ಈ ಹಿಂದೆ ಕಾಂಗ್ರೆಸ್ ಬೆಂಬಲಿತರಾಗಿದ್ದ ಕರಿಬಸಮ್ಮ ಆಯ್ಕೆಯಾಗಿದ್ದು, ಯಾವ ಸದಸ್ಯರು ಅವರಿಗೆ ಬೆಂಬಲಿಸಿದ್ದಾರೆಂಬ ಅನುಮಾನ ಭುಗಿಲೆದ್ದು ಸಭೆಯಲ್ಲಿ ಗೊಂದಲ ಮನೆ ಮಾಡಿತು.