ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಿ.ಪಿ.ಎಲ್ ಕಾರ್ಡ್ ಮಾನದಂಡ ಪರಿಷ್ಕರಣೆ ಕುರಿತು ಆಹಾರ ಸಚಿವರು ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರೋಧಿಸಿದ್ದಾರೆ.
ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜನವಿರೋಧಿ ನಿರ್ಧಾರ ಆರೋಪಿಸಿದ್ದಾರೆ.
5 ಎಕರೆ ಜಮೀನು, ಮನೆಯಲ್ಲಿ ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ಕೊಡುವಂತೆ ಹೇಳಿರುವುದು ಜನವಿರೋಧಿ ನೀತಿ ಎಂದು ತಿಳಿಸಿದ್ದಾರೆ.
5 ಎಕರೆ ಜಮೀನು ಹೊಂದಿರುವ ಅನ್ನದಾತನ ಸ್ಥಿತಿ ಆಹಾರ ಸಚಿವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಟೋಪಿ ಹಾಕಿದವರಿಂದ ಬೇರೆನು ನಿರೀಕ್ಷಿಸಲು ಸಾಧ್ಯ?: ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡದೇ ಟೋಪಿ ಹಾಕಿರುವ ಸಚಿವರಿಂದ ಬೇರೆಯದ್ದೇನು ನಿರೀಕ್ಷಿಸಲು ಸಾಧ್ಯ ಎಂದು ಟಾಂಗ್ ನೀಡಿದರು.
ಪಡಿತರ ಕಾರ್ಡ್ ವಾಪಸ್ ಪಡೆಯುವ ನಿರ್ಣಯ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಭೋಜೇಗೌಡ, ಎಂ. ಶ್ರೀಕಾಂತ್, ನಾಗರಾಜ್ ಕಂಕಾರಿ ಉಪಸ್ಥಿತರಿದ್ದರು.