ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿವಿಧೆಡೆ ಮನೆಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ರಮೇಶ್(67) ಬಂಧಿತ ಆರೋಪಿ. ಈತನ ವಿರುದ್ಧ 2020ರಲ್ಲಿ ಜಯನಗರ ಹಾಗೂ ವಿನೋಬನಗರ ಪೆÇಲೀಸ್ ಠಾಣೆಯಲ್ಲಿ ತಲಾ ಒಂದರಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಶಿವಮೊಗ್ಗ ಡಿ.ವೈ.ಎಸ್.ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ವಿನೋಬ ನಗರ ವೃತ್ತದ ಸಿಪಿಐ ಎನ್.ಎಸ್. ರವಿ, ನೇತೃತ್ವದಲ್ಲಿ ಪಿ.ಎಸ್.ಐ ಕೋಮಲ್ ಎ.ಎಸ್.ಐ ಕೆ.ಸೋಮು, ಸಿಬ್ಬಂದಿ ಸುಧಾಕರ್, ಆದರ್ಶ್, ಶಿವರಾಜ್ ನಾಯಕ್, ರಾಮಕೃಷ್ಣ, ರೋಷನ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ವಶಕ್ಕೆ ಪಡೆದಿದ್ದೇನು | 12 ಲಕ್ಷ ರೂಪಾಯಿ ಮೌಲ್ಯದ ಒಟ್ಟು 255 ಗ್ರಾಂ ಚಿನ್ನಾಭರಣ, 170 ಗ್ರಾಂ. ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನ ನೀಡಲಾಗಿದೆ.