ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಮಾನಸಧಾರ ಟ್ರಸ್ಟಿನ ಮಾನಸಿಕ ಅಸ್ವಸ್ಥರ ಪುನಃಶ್ಚೇತನ ಕೇಂದ್ರದಲ್ಲಿ ಒಟ್ಟು 23 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ವಿಚಿತ್ರವೆಂದರೆ ಇವರಲ್ಲಿ ಯಾರಿಗೂ ಬಾಹ್ಯ ಸಂಪರ್ಕವಿಲ್ಲ. ಕೇಂದ್ರದಲ್ಲಿಯೇ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದರೂ ಸೋಂಕು ಹೇಗೆ ತಗಲಿತು ಎಂಬುವುದು ಇನ್ನೂ ಪತ್ತೆಯಾಗಿಲ್ಲ.
ಪತ್ತೆಯಾಗಿದ್ದು ಹೇಗೆ | ಇತ್ತೀಚೆಗೆ ಏಳು ಮಕ್ಕಳಲ್ಲಿ ಜ್ವರ ಕಂಡುಬಂದಿತ್ತು. ಹೀಗಾಗಿ, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆಗ ಇವರಲ್ಲಿ ಸೋಂಕಿರುವುದು ದೃಢಪಟ್ಟಿದೆ. ತಕ್ಷಣ ಮಕ್ಕಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಪೈಕಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ.
ಎಲ್ಲರ ಸ್ಕ್ರೀನಿಂಗ್ | ಪುನಃಶ್ಚೇತನ ಕೇಂದ್ರದಲ್ಲಿ 98 ಜನರಿದ್ದು, ಅದನ್ನು ಕಂಟೈನೆಂಟ್ ಜೋನ್ ಎಂದು ಗುರುತಿಸಲಾಗಿದೆ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಮತ್ತೆ ಎಂಟು ಜನರಿಗೆ ಕೊರೊನಾ ಸೋಂಕು ತಗಲಿರುವುದು ಪತೆಯಾಗಿದೆ. 23 ಜನರ ಹೊರತು ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು `ಸುದ್ದಿ ಕಣಜ.ಕಾಂ’ಗೆ ತಿಳಿಸಿವೆ.
ಮಹಾರಾಷ್ಟ್ರ ಲಿಂಕ್ ಇಲ್ಲ | ಮಹಾರಾಷ್ಟ್ರ ಅಥವಾ ಕೇರಳಾದಿಂದ ಬಂದವರಿಂದ ಸೋಂಕು ಹರಡಿಲ್ಲ. ಬದಲಿಗೆ ಕೇಂದ್ರಕ್ಕೆ ಬರುವವರಿಂದ ತಗಲಿರಬಹುದು ಎಂದು ಶಂಕಿಸಲಾಗಿದೆ. 23 ಜನ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಇಲ್ಲ.