ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೋಟರಿ ಕ್ಲಬ್ ರಿಪ್ಪನ್ಪೇಟೆ, ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ಗ್ಲೋಬಲ್ ಗ್ರ್ಯಾಂಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ 8 ಲಕ್ಷ ರೂ. ವೆಚ್ಚದಲ್ಲಿ 21 ಗೋವುಗಳನ್ನು ದಾನ ಮಾಡಲಾಯಿತು.
ರೋಟರಿ ಸಂಸ್ಥೆಯಿಂದ ಪ್ರತಿ ವರ್ಷ ನೂರಾರು ಹಸುಗಳನ್ನು ಬಡ ಕುಟುಂಬಗಳಿಗೆ ಗ್ಲೋಬಲ್ ಗ್ರ್ಯಾಂಟ್ ಅಡಿನೀಡುತ್ತ ಬರಲಾಗುತ್ತಿದೆ. ಈಗ ಗೋವುಗಳನ್ನು ಪಡೆದ ಫಲಾನುಭವಿಗಳು ಗೋವುಗಳಿಂದ ಬರುವ ಕರುಗಳನ್ನು ಬರುವ ದಿನಗಳಲ್ಲಿ ಇನ್ನೊಂದು ಕುಟುಂಬಕ್ಕೆ ದಾನ ಮಾಡಬೇಕು. ಈ ದಆನ ಸಂಸ್ಕøತಿಯನ್ನು ಹೀಗೆಉಏ ಮುಂದುವರಿಸಬೇಕು ಎಂದು ರೋಟರಿ ಜಿಲ್ಲೆ 3180ರ ಮಾಜಿ ಜಿಲ್ಲಾ ಗವರ್ನರ್ ಡಾ. ಪಿ.ನಾರಾಯಣ್ ಮನವಿ ಮಾಡಿದರು.
ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ಅವರು ಗೋವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ಜೆ.ರಾಧಾಕೃಷ್ಣ ವಹಿಸಿದ್ದರು. ವಲಯ 11ರ ಸಹಾಯಕ ಗವರ್ನರ್ ಡಾ. ನಂದ ಕಿಶೋರ್, ಮಾಜಿ ಅಧ್ಯಕ್ಷ ಗಣೇಶ್ ಎನ್.ಕಾಮತ್, ಕಾರ್ಯದರ್ಶಿ ನಾಗಭೂಷಣ್ ಆರ್, ವಲಯ ತರಬೇತುದಾರರಾದ ಜಿ.ವಿಜಯ್ಕುಮಾರ್, ಲಕ್ಷ್ಮಣ್ಗೌಡ, ರಾಮಕೃಷ್ಣ ಎನ್.ಎಚ್, ವರ್ಗೀಸ್, ಡಾಕಪ್ಪ ಉಪಸ್ಥಿತರಿದ್ದರು.