ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಗಂಗಾಮತಸ್ಥರ ಸಂಘದ 50ನೇ ವರ್ಷದ ಸುಗಳಿಗೆಯಲ್ಲಿ `ಸುವರ್ಣ ಸಂಭ್ರಮ’ ಹೆಸರಿನ ವಿಶೇಷ ಸ್ಮರಣ ಸಂಚಿಕೆ ಹೊರತರುತ್ತಿದೆ. ಅದಕ್ಕಾಗಿ ಬರಹಗಳನ್ನು ಆಹ್ವಾನಿಸಿದೆ ಎಂದು ಸ್ಮರಣ ಸಂಚಿಕೆ ಗೌರವ ಸಂಪಾದಕ ಎ.ಹಾಲೇಶಪ್ಪ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಹಿರಿಯ, ಕಿರಿಯ ಬರಹಗಾರರು ಸಮಾಜ ನಡೆದು ಬಂದ ದಾರಿ, ಸಾಧಕರ ಪರಿಚಯ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸಾಧನೆ ಹೀಗೆ ವಿವಿಧ ಸಮಾಜಮುಖಿ ಬರಹಗಳನ್ನು ಬರೆಯಲು ಅವಕಾಶ ನೀಡಿದೆ.
ಇಲ್ಲಿಗೆ ಕಳುಹಿಸಿ | ಬರಹಗಳನ್ನು 250 ಪದಗಳಿಗೆ ಮೀರದಂತೆ ನುಡಿಯಲ್ಲಿ ಟೈಪ್ ಮಾಡಿ ಏಪ್ರಿಲ್ 30ರೊಳಗೆ ಕಳುಹಿಸತಕ್ಕದ್ದು. ಸಮಾಜದ ಲೇಖಕರು ತಮ್ಮ ಲೇಖನಗಳನ್ನು suvarnasambrama2020@gmail.com ಇಮೇಲ್ ಐಡಿಗೆ ಕಳುಹಿಸಬಹುದು. ಅಥವಾ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಂಘ, ಬಾಪೂಜಿ ನಗರ ಬರವಣಿಗೆಯಲ್ಲೂ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9480151123, 9448681555, 9483493666 ಕರೆ ಮಾಡುವಂತೆ ಹೇಳಿದರು.
ಬಾಪೂಜಿ ನಗರದಲ್ಲಿರುವ ಜಿಲ್ಲಾ ಗಂಗಾಮತ ವಿದ್ಯಾರ್ಥಿನಿಲಯದ 2ನೇ ಮಹಡಿ ಕಟ್ಟಡದ ಉದ್ಘಾಟನೆ ಸಮಾರಂಭ ಮಾರ್ಚ್ 2 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಟ್ಟಡ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಗಂಗಾಮತ ಸಮಾಜದ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸುವರು.
– ಡಿ.ಬಿ.ಕೆಂಚಪ್ಪ, ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ
ಮಾಧ್ಯಮಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಜಿ.ಶೇಖರಪ್ಪ, ಕೆ.ಆರ್.ಮೇಘರಾಜ್, ಕೆ.ವಿ.ಅಣ್ಣಪ್ಪ, ಬಿ.ಡಿ.ರವಿಕುಮಾರ್, ಎಚ್.ಎಂ.ರಂಗನಾಥ್, ಎಚ್.ಎಸ್.ಚಂದ್ರಶೇಖರ್, ಎಂ.ಎಚ್.ಸತ್ಯನಾರಾಯಣ, ವಕೀಲ ಬಿ.ಎಚ್.ಚನ್ನಪ್ಪ ಉಪಸ್ಥಿತರಿದ್ದರು.