ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಸೆಕ್ರೇಡ್ ಹಾರ್ಟ್ ಪ್ರಧಾನ ದೇವಾಲಯದ ಎದುರು ಕ್ರೈಸ್ತ ಸಮುದಾಯದವರು ಧರಣಿ ಸತ್ಯಾಗ್ರಹ ನಡೆಸಿದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಧರಣಿ ನಡೆಯಲಿದೆ.
ಚರ್ಚ್ನ ಫಾದರ್ ಗಿಲ್ಬರ್ಟ್ ಲೊಬೋ ಅವರ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕೂಡಲೇ ವರ್ಗಾವಣೆ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಲೋಬೋ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಧಾರ್ಮಿಕ ಕಾರ್ಯಗಳನ್ನು ಸಹ ಪ್ರಾಮಾಣಿಕ, ಬದ್ಧತೆಯಿಂದ ಮಾಡುತ್ತಿದ್ದಾರೆ. ಅವರ ವರ್ಗಾವಣೆಯಿಂದ ಅಭಿವೃದ್ಧೀ ಕಾಮಗಾರಿಗಳು ಅರ್ಧಕ್ಕೆ ಬಿಟ್ಟಂತಾಗಲಿದೆ ಎಂದು ಧರಣಿನಿರತರು ತಿಳಿಸಿದ್ದಾರೆ.
ಅರ್ಪುದಾ ಸ್ವಾಮಿ, ಸುರೇಶ್, ಪ್ರಿನ್ಸ್, ಆರ್.ಕೆ.ರಾಜ್, ದಿಕ್ಷಿತ್ ಭಾಗವಹಿಸಿದ್ದರು.