ಸುದ್ದಿ ಕಣಜ.ಕಾಂ
ಶಿವಮೊಗ್ಗ: ವ್ಯಾಘ್ರ ಕಿರುಚಿತ್ರದ ಪ್ರೀಮಿಯರ್ ಶೋ ಫೆಬ್ರವರಿ 27ರಂದು ಸಂಜೆ 5 ಗಂಟೆಗೆ ನಗರದ ಭಾರತ್ ಸಿನಿಮಾ ಟಾಕೀಸ್ ನಲ್ಲಿ ಸಮನ್ವಯ ತಂಡದಿಂದ ಏರ್ಪಡಿಸಲಾಗಿದೆ.
ಇದನ್ನೂ ಓದಿ| ವಿದ್ಯುತ್ ಬಿಲ್, ಪವರ್ ಕಟ್ ಇತ್ಯಾದಿ ಮಾಹಿತಿ ಬೇಕೆ, ಹಾಗಾದರೆ ಎಲ್ಲದಕ್ಕೂ ಉತ್ತರ ನೀಡಲಿದೆ ‘ನನ್ನ ಮೆಸ್ಕಾಂ’!
ಐಎಎಸ್ ಅಧಿಕಾರಿ ಕೆ.ಎ. ದಯಾನಂದ್ ಪ್ರೀಮಿಯರ್ ಶೋನಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಕ ವಿಠ್ಠಲ್ ರಂಗದೋಳ್, ಕ್ಯಾಮೆರಾಮನ್ ಮಧುಸೂದನ್, ನಿರ್ದೇಶಕ ಮದನ್ ರಾಯ್, ನಿರ್ಮಾಪಕ ಹರ್ಷ ಕಾಮತ್ ಆಗಮಿಸಲಿದ್ದಾರೆ.
200 ಜನರಿಗೆ ಅವಕಾಶ | ಶೋ ವೀಕ್ಷಿಸುವುದಕ್ಕೆ 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಚಿತ ಪಾಸ್ ವ್ಯವಸ್ಥೆ ಕೂಡ ಇದ್ದು, ಮೊದಲು ಬಂದವರಿಗೆ ಆದ್ಯತೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9945387650 ಸಂಪರ್ಕಿಸಬಹುದು.