ಸುದ್ದಿ ಕಣಜ.ಕಾಂ
ಸೊರಬ: ಶಾಸಕ ಕುಮಾರ ಬಂಗಾರಪ್ಪ ಅವರ ಮನವೊಲೈಸಲು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ತಂಡ ಭಾನುವಾರ ಅವರ ಮನೆಗೆ ಭೇಟಿ ನೀಡಿದೆ.
ಇದನ್ನೂ ಓದಿ । ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ
ಮೂಗೂರು ಏತ ನೀರಾವರಿ ಯೋಜನೆ ಲೋಕಾರ್ಪಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಸೊರಬಕ್ಕೆ ಆಗಮಿಸಿದ್ದು, ಈ ವೇಳೆ ಕಾರ್ಯಕ್ರಮದಲ್ಲಿಯೇ ಭಾಗವಹಿಸದಿರಲು ಶಾಸಕ ಕುಮಾರ ಬಂಗಾರಪ್ಪ ನಿರ್ಧರಿಸಿದ್ದರು ಎಂದು ಗೊತ್ತಾಗಿದೆ. ತಕ್ಷಣ, ಸಂಸದ ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕುಮಾರ್ ಅವರಿಗೆ ಭೇಟಿ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಳಿಕ ಕುಮಾರ ಬಂಗಾರಪ್ಪ ಹಾಗೂ ರಾಘವೇಂದ್ರ ಸೇರಿದಂತೆ ಎಲ್ಲರೂ ನಗುನಗುತ್ತಲೇ ಕುಮಾರ ಬಂಗಾರಪ್ಪ ಮನೆಯಿಂದ ಹೊರಗಡೆ ಬಂದಿದ್ದಾರೆ.
ಇದನ್ನೂ ಓದಿ । ಬಜೆಟ್ನಲ್ಲಿ ಮಹಿಳೆಯರ ಅಭಿವೃದ್ಧಿ, ನೀರಾವರಿ ಯೋಜನೆಗೆ ಒತ್ತು, ಸಿಎಂ ಯಡಿಯೂರಪ್ಪ ಘೋಷಣೆ
ಶಾಸಕರ ಮುನಿಸಿಗೇನು ಕಾರಣ | ‘ಏತ ನೀರಾವರಿ ಯೋಜನೆಯ ಫ್ಲೆಕ್ಸ್ ಗಳಲ್ಲಿ ಶಾಸಕ ಕುಮಾರ ಬಂಗಾರಪ್ ಹೆಸರು ಹಾಕಿಲ್ಲ ಹಾಗೂ ಯೋಜನೆಯ ಬಗ್ಗೆ ಸಿದ್ಧಪಡಿಸಿದ ಶಾರ್ಟ್ ಮೂವಿಯಲ್ಲೂ ಇವರ ಬಗ್ಗೆ ಹೇಳಿಲ್ಲ’ ಈ ಕಾರಣದಿಂದಾಗಿ ಶಾಸಕರು ಮುನಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕಡೆಗಣನೆಗೆ ಕಾರಣವೇನು | ಮೂಲಗಳು ಪ್ರಕಾರ, ಸೊರಬ ಕ್ಷೇತ್ರದಲ್ಲಿ ಮೂಲ ಹಾಗೂ ವಲಸೆ ಬಿಜೆಬಿಗರ ನಡುವಿನ ತಿಕ್ಕಾಟ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಮುಸುಕಿನ ಗುದ್ದಾಟದ ಮಧ್ಯೆ ಶಾಸಕ ಹೆಸರು ಕೈಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ । ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ | ಮತ್ತೆ ಹಾಲು ಖರೀದಿ ದರ ಹೆಚ್ಚಿಸಿದ ಶಿಮುಲ್, ನಾಳೆಯಿಂದ ಅನ್ವಯ
ಈ ಬಗ್ಗೆ ಸಂಸದರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವುದೇ ಅಸಮಾಧಾನವಿಲ್ಲ. ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೆ ಆಮಂತ್ರಿಸಲು ಬಂದಿದ್ದೇವಷ್ಟೆ ಎಂದು ತಿಳಿಸಿದ್ದಾರೆ.