- ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಂಸಿ ಉಪ ವಿಭಾಗದ ಶ್ರೀರಾಂಪುರ ಶಾಖೆ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಆಲ್ಕೋಳ 110/11 ಕೆ.ವಿ ವಿದ್ಯುತ್ ವಿತರಣ ಕೇಂದ್ರದಿಂದ ಸರಬರಾಜಾಗುವ ಎ.ಎಫ್-13, ಎ.ಎಫ್-19 ಮತ್ತು ಎ.ಎಫ್-12 ಮಾರ್ಗಗಳ ವ್ಯಾಪ್ತಿಯಲ್ಲಿ ಫೆಬ್ರವರಿ 21
ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ | ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಬೋವಿ ಕಾಲೊನಿ, ಅಂಬೇಡ್ಕರ್ ನಗರ, ಭೈರನಕೊಪ್ಪ, ಹನುಮಂತ ನಗರ, ವೆಟರ್ನರಿ ಕಾಲೇಜು, ಕ್ರಷರ್ಸ್ ವ್ಯಾಪ್ತಿ, ಆಲ್ಕೋಳ ಎಸ್.ಎಲ್.ವಿ ಲೇಔಟ್, ಜೆ.ಎಚ್.ಪಾಟೇಲ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿ ನಗರ ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ ವಿಜಯಲಕ್ಷ್ಮಿ ಲೇಔಟ್, ಎಂಎಂಎಸ್ ಲೇಔಟ್, ಕೆ.ಎಚ್.ಬಿ ಲೇಔಟ್, ಮಹಾಲಕ್ಷೀ ಲೇಔಟ್, ಶಿವಸಾಯಿ ಕ್ಯಾಸ್ಟಿಂಗ್ ಫ್ಯಾಕ್ಟರಿ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.