ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲೋಕಾಯುಕ್ತ ವರದಿಯಲ್ಲಿ ಶಿವಮೊಗ್ಗ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡ)ದ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಒಪ್ಪಿಕೊಂಡಿದೆ. ಆದರೆ, ವರದಿಯಲ್ಲಿ 498 ನಿವೇಶನ ಸಕ್ರಮ ಎಂದು ಹೇಳಿದ್ದು, ಅದರಲ್ಲೂ ಸಾಕಷ್ಟು ಲೋಪಗಳಾಗಿವೆ ಎಂದು ಆರೋಪ ಕೇಳಿಬಂದಿದೆ.
ಇದನ್ನೂ ಓದಿ । ಒಂದು ದಿನ ಟೀಚರ್ ಆದ ಡಿಸಿ!
ಸಕ್ರಮ ಎಂದು ಹೇಳಿರುವ ನಿವೇಶನದ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಒತ್ತಾಯಿಸಿದರು.
ಲೋಪದೋಷಗಳನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ ಮಾನದಂಡಗಳನ್ವಯ ನಿವೇಶನಗಳನ್ನು ಮರು ಹಂಚಿಕೆ ಮಾಡಬೇಕು.
ಏನಿದು ಅವ್ಯವಹಾರ | ಸೂಡದಿಂದ 2011-12ರಲ್ಲಿ 1,802 ನಿವೇಶನ ರಚಿಸಿ 1,305 ಹಂಚಿಕೆ ಮಾಡಿತ್ತು. ಆದರೆ, ಭ್ರಷ್ಟಾಚಾರ ನಡೆದಿರುವ ಬಗ್ಗೆ 2014ರಿಂದ ತನಿಖೆ ಆರಂಭಿಸಿದ ಲೋಕಾಯುಕ್ತ 807 ನಿವೇಶನಗಳು ಅಕ್ರಮ ಹಾಗೂ 498 ನಿವೇಶನಗಳು ಸಕ್ರಮ ಎಂದು ಸರ್ಕಾರಕ್ಕೆ ಕಳೆದ ಡಿಸೆಂಬರ್ನಲ್ಲಿ ವರದಿ ನೀಡಿದೆ.
ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಬಿ.ಎಂ.ಚಿಕ್ಕಸ್ವಾಮಿ, ಆರ್.ಶ್ರೀಕಾಂತ್, ಜನಮೇಜಿರಾವ್, ಸಹನರಾವ್, ತಿಮ್ಮಣ್ಣ, ಚಿದಾನಂದ್ ಉಪಸ್ಥಿತರಿದ್ದರು.