ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಮುಗಲಭೆಗೆ ಕಾರಣೀಭೂತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭದ್ರಾವತಿ ಬಂದ್ ಮಾಡುವುದಾಗಿ ಶಾಸಕ ಬಿ.ಕೆ.ಸಂಗಮೇಶ್ವರ್ ಎಚ್ಚರಿಸಿದರು.
ಇದನ್ನೂ ಓದಿ | ಕಬಡ್ಡಿ ಪಂದ್ಯಾವಿಯಲ್ಲಿ ಮಾರಾಮಾರಿ, ಲಾಠಿ ಚಾರ್ಜ್
ಭದ್ರಾವತಿಯಲ್ಲಿ ಭಾನುವಾರ ಸಂಜೆ ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಅವರನ್ನು ಕರೆತಂದು ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಸಹಿಸದೇ ಗಲಾಭೆ | ಭದ್ರಾವತಿ ನಗರದಲ್ಲಿ ಆಯೋಜನೆಗೊಂಡಿದ್ದ ಕಬಡ್ಡಿ ಪಂದ್ಯಾವಳಿ ಯಶಸ್ಸನ್ನು ಸಹಿಸಲಾಗದೇ ಈ ಕೃತ್ಯ ಎಸಗಲಾಗಿದೆ. ಉತ್ತಮ ಜನಾಭಿಪ್ರಾಯ ಕೂಡ ವ್ಯಕ್ತವಾಗಿದೆ. ಇದನ್ನು ಸಹಿಸಲಾಗದೇ ಗಲಭೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.