ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮ ವೇಳಾಪಟ್ಟಿ ಪ್ರಕಾರ ಸೋಮವಾರ ಬೆಳಗ್ಗೆ 10.45 ಗಂಟೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಆದರೆ, ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ ಆಗಿದೆ. ಸೋಮವಾರ ಸಿಎಂ ಶಿವಮೊಗ್ಗದಲ್ಲೇ ತಂಗಲಿದ್ದಾರೆ.
ಇದನ್ನೂ ಓದಿ । ಖೇಲೊ ಇಂಡಿಯಾ ವಿಂಟರ್ ಗೇಮ್ಸ್, ಚಿನ್ನದ ಬೇಟೆ ಮಡಿದ ಮಲೆನಾಡಿಗರು
ನಮ್ಮೊಲುಮೆಯ ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಂಜೆ ಅಭಿನಂದನಾ ಸಮಾರಂಭದಲ್ಲಿ ಸಂತಸದಿಂದ ಭಾಗವಹಿಸಿದ್ದರು.
ರಾಜ್ಯ ಬಜೆಟ್ ಹಿನ್ನೆಲೆ ಸಿಎಂ ಬೆಂಗಳೂರಿಗೆ ತೆರಳಬೇಕಿತ್ತು. ಆದರೆ, ದಿಢೀರ್ ನಿರ್ಧಾರ ಬದಲಿಸಿರುವ ಸಿಎಂ ಇಂದು ಇಲ್ಲಿಯೇ ತಂಗಲಿದ್ದಾರೆ. ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ತೆರಳಲಿದ್ದಾರೆ.
ಇಂದು ಸಂಜೆ ಅಭಿನಂದನಾ ಸಮಾರಂಭದಲ್ಲಿ ಆಳ್ವಾಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿದ್ದು ಅದರಲ್ಲೂ ಭಾಗವಹಿಲಿಸಲಿದ್ದಾರೆ ಎಂದು ತಿಳಿದುಬಂದಿದೆ.