ಸುದ್ದಿ ಕಣಜ.ಕಾಂ
ಶಂಕರಘಟ್ಟ(ಭದ್ರಾವತಿ): ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾರ್ಚ್ 3ರಂದು ನಡೆಯಲಿರುವ ವಿಶ್ವ ವನ್ಯಜೀವಿ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ವನ್ಯಜೀವಿ ಛಾಯಚಿತ್ರಗರರಾದ ಕೃಪಾಕರ್ ಮತ್ತು ಸೇನಾನಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ವಿವಿಯ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗವು ಮಾ. 3ರಿಂದ 5ರ ವರೆಗೆ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿರುವ ವಿಶ್ವ ವನ್ಯಜೀವಿ ದಿನಾಚರಣೆ ಮತ್ತು ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗಣೇಶಯ್ಯ ಭಾಗಿ | ಮಾರ್ಚ್ 3ರಂದು ಉದ್ಘಾಟನಾ ಸಮಾರಂಭವಿದ್ದು, ಖ್ಯಾತ ವನ್ಯಜೀವಿ ಛಾಯಚಿತ್ರಗಾರರು, ತಜ್ಞರು ಆದ ಕೃಪಾಕರ್ ಮತ್ತು ಸೇನಾನಿ ಮುಖ್ಯಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಪ್ರಕೃತಿವಾದಿ ಎಸ್.ಎಸ್. ಸುನೀಲ್ ಪ್ರಾಕೃತಿಕ ಇತಿಹಾಸ, ಮಾರ್ಚ್ 4ರಂದು ಉರಗತಜ್ಞ ನಾಗರಾಜ್ ಬೆಳ್ಳೂರ್ ಹಾವುಗಳ ಸಂರಕ್ಷಣೆ ಮತ್ತು ಅರಿವಿನ ಕುರಿತು, ಮಾರ್ಚ್ 5ರಂದು ವಿಜ್ಞಾನಿ, ಕಾದಂಬರಿಕಾರ, ಸಾಹಿತಿ ಡಾ. ಕೆ.ಎನ್.ಗಣೇಶಯ್ಯ ಅವರು `ಸಂರಕ್ಷಣೆಯಲ್ಲಿ ಸಂಸ್ಕøತಿ, ಧರ್ಮ ಮತ್ತು ವಿಜ್ಞಾನ’ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ವಿವಿಧ ಸ್ಪರ್ಧೆ | ಮೂರು ದಿನಗಳಲ್ಲಿ ಪೇಂಟಿಂಗ್ ಸ್ಪರ್ಧೆ, ಪಕ್ಷಿಗಳ ವೀಕ್ಷಣೆ ಮತ್ತು ಅಧ್ಯಯನ ಸ್ಪರ್ಧೆ, ಅಂತರ್ ವಿಭಾಗ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಅಧ್ಯಕ್ಷ ಡಾ. ವಿಜಯ್ ಕುಮಾರ್ ತಿಳಿಸಿದ್ದಾರೆ.