ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದಲ್ಲಿ ಇತ್ತೀಚೆಗೆ ಆನೆಯೊಂದರ ಮೇಲೆ ದಾಳಿ ನಡೆಸಿ ಭಾರಿ ಸದ್ದು ಮಾಡಿದ್ದ 35 ವರ್ಷದ ಮಣಿಕಂಠನ ಮೇಲೆ ಕಾಡಾನೆಯೊಂದು ಭಾನುವಾರ ರಾತ್ರಿ ದಾಳಿ ನಡೆಸಿದೆ.
ಈ ಬಗ್ಗೆ ಆನೆ ಹಿಡಿಯಲು ಮಾವುತ, ಕಾವಾಡಿಗಳು ಸೋಮವಾರ ಬೆಳಗ್ಗೆ ಹೋದಾಗ ಗಮನಕ್ಕೆ ಬಂದಿದ್ದು, ಮಣಿಕಂಠನನ್ನು ಕ್ಯಾಂಪ್ ಗೆ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ | ಹಂತಕ ಸಲಗನ ಪುಂಡಾಟ, ಸ್ವಲ್ಪದ್ದರಲ್ಲೇ ಮಾವುತ ಬಚಾವ್
ಮದದಲ್ಲಿ ತುಂಗೆಯ ಹಿನ್ನೀರಿನಲ್ಲಿ ಸ್ನಾನ ಮಾಡಿಸುವಾಗ ಗಲಾಟೆ ಮಾಡಿದ್ದ ಮಣಿಕಂಠ ಕ್ಯಾಂಪಿನ ಆನೆಗಳ ಮೇಲೆ ದಾಳಿ ನಡೆಸಿತ್ತು. ಗಂಟೆಗಟ್ಟಲೇ ನೀರಿನಲ್ಲೇ ಇದ್ದು ಸಿಬ್ಬಂದಿಯ ತಲೆ ನೋವಿಗೆ ಕಾರಣವಾಗಿತ್ತು. ಇದಾದ ನಂತರ ಮದಗಜವನ್ನು ಕಾಡಿನಲ್ಲಿ ಬಿಡಲಾಗಿತ್ತು. ಸಿಬ್ಬಂದಿ ಅದನ್ನು ಹಿಡಿದು ಕ್ಯಾಂಪಿಗೆ ತರಲು ಸಾಧ್ಯವಾಗಿರಲಿಲ್ಲ.
ಸರಪಳಿಯಲ್ಲಿದ್ದ ಮಣಿಕಂಠನ ಮೇಲೆ ಅಟ್ಯಾಕ್ | ಸಾಮಾನ್ಯವಾಗಿ ಮದ ಗಜಗಳಿಗೆ ಹೆಚ್ಚುವರಿ ಸರಪಳಿಗಳನ್ನು ಹಾಕಲಾಗುತ್ತದೆ. ಹೀಗಾಗಿ, ಕಾಡಾನೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಾಗಿದೆ.