ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಭಾರತ್ ಥಿಯೇಟರ್ ನಲ್ಲಿ ಓಂ ಗುರು ಬಸರೂರು ನಿರ್ದೇಶನದ `ಕುಂದಾಪುರ’ ಸಿನಿಮಾ ಮಾರ್ಚ್ 5ರಂದು ತೆರೆ ಕಾಣಲಿದೆ ಎಂದು ನಿರ್ದೇಶಕ ಓಂ ಗುರು ತಿಳಿಸಿದರು.
ಸಿನಿಮಾ ಟ್ರೈಲರ್ ಪ್ರದರ್ಶಿಸಿದ ಅವರು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಸಿನಿಮಾ ಅತ್ಯಂತ ಕುತೂಹಲ ಮತ್ತು ಹಾಸ್ಯ ಭರಿತವಾಗಿದೆಚಿತ್ರದ ಹೆಸರು ಕುಂದಾಪುರ’ ಎಂದಿದೆ. ಆದರೆ, ಅಡಿ ಬರಹ `ದ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ’ ಎಂದಿದೆ ಎಂದು ಚಿತ್ರದ ಬಗ್ಗೆ ಇರುವ ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡರು.
ಮಂಗಳೂರು ತೆರೆ ಕಂಡ ಚಿತ್ರ | ಮಂಗಳೂರಿನಲ್ಲಿ ಈಗಾಗಲೇ ಚಿತ್ರ ತೆರೆ ಕಂಡಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಮಾರ್ಚ್ 5ರಂದು ಶಿವಮೊಗ್ಗದಲ್ಲಿ ಬಿಡುಗಡೆ ಕಾಣಲಿದೆ. ಸಿನಿಮಾಸಕ್ತರು ನೋಡಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಯೂಟ್ಯೂಬ್ ನಲ್ಲಿ ಹವಾ | ಚಂದ್ರಶೇಖರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉತ್ತಮ್ ಸಾರಂಗ ಸಂಗೀತ ನಿರ್ದೇಶಕರಾಗಿದ್ದು, ಕುಂದಾಪುರ ಕನ್ನಡದಲ್ಲಿ ಸಿನಿಮಾ ಗಮನ ಸೆಳೆಯಲಿದೆ. ಯೂಟ್ಯೂಬ್ ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಉಡುಪಿಯಲ್ಲಿ ಶೂಟಿಂಗ್ | ಉಡುಪಿಯಲ್ಲಿ ಚಿತ್ರವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿದೆ. ಚಂದ್ರಶೇಖರ್ ಬಸ್ರೂರು ಮತ್ತು ಓಂಗುರು ಚಿತ್ರ ನಿರ್ಮಾಣ ಮಾಡಿದ್ದು, ಪ್ರವೀಣ್ ನಾಡಾ ಛಾಯಾಗ್ರಹಣ ಮಾಡಿದ್ದಾರೆ.
ತಾರಾಗಣ | ಚಿತ್ರದಲ್ಲಿ ಬಾಲ ರಜವಾಡಿ, ಓಂ ಗುರು ಬಸ್ರೂರು, ಚಂದ್ರಶೇಖರ್ ಬಸ್ರೂರು, ಕರುಣಕರ, ಕವನ ಜಗ್ವಾರ್, ಹರ್ಷ ದಾಂಡೇಲಿ, ರಘು ಪಾಂಡೇಶ್ವರ್, ನಾಗರಾಜ್ ಗೋಳಿ, ಸತ್ಯನಾರಾಯಣ ಬಸ್ರೂರು, ನಾಗರಾಜ್ ತೆಕ್ಕಟ್ಟೆ, ಸ್ವರಾಜ್ಯ ಲಕ್ಷ್ಮಿ, ಪ್ರಭಾಕರ್ ಕುಂದರ್, ಉನ್ನತಿ ಉಡುಪಿ ಮತ್ತಿತರ ಕಲಾವಿದರು ಅಭಿನಯಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಚಂದ್ರಶೇಖರ್ ಬಸ್ರೂರು, ಪ್ರವೀಣ್ ನಾಡಾ, ಕಲಾವಿದರಾದ ಪ್ರದೀಪ್, ರಾಹುಲ್, ಆದಿತ್ಯ ಪ್ರಸಾದ್ ಉಪಸ್ಥಿತರಿದ್ದರು.