ಸುದ್ದಿ ಕಣಜ.ಕಾಂ
ಭದ್ರಾವತಿ: ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆ ಸಂಬಂಧ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಬಿ.ಕೆ.ಮೋಹನ್ ಅವರ ಮೇಲೆಯೂ ಪ್ರಕರಣ ದಾಖಲಿಸಿರುವುದನ್ನು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ.ವೀರಭದ್ರಪ್ಪಗೌಡ ಖಂಡಿಸಿದರು.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆ ವಿನಹ ಅನಗತ್ಯವಾಗಿ ತಪ್ಪು ಮಾಡದೇ ಇರುವವರ ಮೇಲೆ ಕ್ರಮ ವಹಿಸಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದರು.
307 ಕಲಂ ಅಡಿ ಪ್ರಕರಣ ದಾಖಲಿಸಿರುವುದೇ ಅನವಶ್ಯಕ. ಅದೇ ಬಿಜೆಪಿ ಕಡೆಯ ಯಾರನ್ನೂ ಬಂಧಿಸಿಲ್ಲ. ಶಾಸಕರ ಪುತ್ರ ಹಾಗೂ ಅವರ ಕಡೆಯವರನ್ನು ಬಂಧಿಸಿರುವುದು ಖಂಡನೀಯ.
– ಸಮಾಜದ ಮುಖಂಡರು
ಮುಖಂಡ ಸಂಜೀವ್ ಕುಮಾರ್ ಮಾತನಾಡಿ, ಶಾಸಕರ ಮೇಲೆ ಪ್ರಕರಣ ದಾಖಲಿಸಿದ್ದು, ಕಲಾಪದಿಂದಲೂ ಒಂದು ವಾರ ಅಮಾನತುಗೊಳಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು. ಜತೆಗೆ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇನ್ನಿತರ ಅಧಿಕಾರಿಗಳು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಶಾಂತಿ ಸಭೆ ನಡೆಸಲಿ ಎಂದು ಹೇಳಿದರು.
ದೊಡ್ಡಗೂಪೇನಹಳ್ಳಿಯ ಶಾಂತಣ್ಣ, ವಿ.ಐ.ಎಸ್.ಎಲ್ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷ ಬಸವಂತಪ್ಪ ಮಾತನಾಡಿದರು.
ಬಿ.ಆರ್.ಪಿ. ಶಣ್ಮುಖಪ್ಪ, ಬಾರಂದೂರು ಶಾಂತಕುಮಾರ್, ಕಡದಕಟ್ಟೆ ರವಿಕುಮಾರ್ ಉಪಸ್ಥಿತರಿದ್ದರು.