ಸುದ್ದಿ ಕಣಜ.ಕಾಂ
ಸೊರಬ: ತಾಲೂಕಿನ ಓಟೂರು ಗ್ರಾಮದಲ್ಲಿ ಸೋಮವಾರ ಹೊರ ರಾಜ್ಯದ ಕಾರ್ಮಿಕನೊಬ್ಬ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಛತ್ತೀಸ್ ಗಢ ಮೂಲದ ಮಹೇಶ್ ಗದಸತೊರೆ ಎಂಬುವವರು ಮೃತಟ್ಟಿದ್ದಾರೆ. ಬೋರ್ ವೆಲ್ ಕೊರಯುವ ಕೆಲಸಕ್ಕೆ ಬಂದಿದ್ದ ಇವರು ತಮಿಳುನಾಡು ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣ ಬಳಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ, ಪೂರೈಕೆ ಎಲ್ಲಿಗೆ?
ಘಟನೆ ನಡೆದಿದ್ದು ಹೇಗೆ | ಬೋರ್ ವೆಲ್ ಕೊರೆಯುವುದಕ್ಕೆ ಎರಡು ಲಾರಿಗಳು ಬಂದಿದ್ದವು. ಲಾರಿಯ ಕೆಳಗಡೆಯೇ ಕೆಲಸಗಾರರು ಬೋರ್ ವೆಲ್ ಸಾಮಗ್ರಿಯ ಅಡಿಯಲ್ಲೇ ಮಲಗಿದ್ದರು. ಈ ವೇಳೆ, ಲಾರಿಯಲ್ಲಿದ್ದ ನೀರು ಖಾಲಿಯಾಗುವ ಹಂತದ್ದಲ್ಲಿದ್ದುದ್ದರಿಂದ ಚಾಲಕನು ಲಾರಿ ಅಡಿ ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಬಳಿಕ ಅವಸರದಲ್ಲಿ ಲಾರಿ ಚಾಲನೆ ಮಾಡಿದ್ದಾರೆ. ಆದರೆ, ಲಾರಿ ಅಡಿಯಲ್ಲೇ ಮಲಗಿದ್ದ ಮಹೇಶ್ ಮೇಲೆ ಲಾರಿ ಹರಿದು ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.