ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಅವರ ಕುಟುಂಬದ ಏಳು ಜನರಿಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಫೆಬ್ರವರಿ 28ರಂದು ರಾತ್ರಿ ಭದ್ರಾವತಿ ನಗರದ ಕನಕ ಮಂಟಪದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಮಹಾಂತೇಶ್ ಎಂಬುವವರು ಶಾಸಕರು ಸೇರಿ ಏಳು ಜನರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ಯಾರಿಗೆ ನಿರೀಕ್ಷಣಾ ಜಾಮೀನು | ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರರಾದ ಬಿ.ಎಸ್.ಗಣೇಶ್, ಬಿ.ಎಸ್.ಬಸವೇಶ್, ಸಂಗಮೇಶ್ವರ್ ಸಹೋದರ ಬಿ.ಕೆ.ಮೋಹನ್ ಅವರ ಪುತ್ರರಾದ ಬಿ.ಎಂ. ರವಿ ಕುಮಾರ್, ಬಿ.ಎಂ.ಮಂಜುನಾಥ್ ಹಾಗೂ ಅವರ ಸ್ನೇಹಿತರಾದ ಸುನೀಲ್ ಎಂಬುವವರಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ.ಕುಡುವಕ್ಕಲಿಗರ್ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ.