ಸುದ್ದಿ ಕಣಜ.ಕಾಂ
ನವದೆಹಲಿ: ಕೋವಿಡ್ ಹಿನ್ನೆಲೆ ಉಂಟಾಗಿದ್ದ ಆರ್ಥಿಕ ಸಂಕಷ್ಟದಿಂದಾಗಿ ತಡೆ ಹಿಡಿದಿದ್ದ ಕೇಂದ್ರ ಸರ್ಕಾರಿ ನೌಕರರ ಮೂರು ಕಂತಿನ ತುಟ್ಟಿ ಭತ್ಯೆ (ಡಿಎ), ತುಟ್ಟಿ ಭತ್ಯೆ ಪರಿಹಾರ (ಡಿ.ಆರ್) ಮೊತ್ತ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಡಿಎ ಮತ್ತು ಡಿಆರ್ ಮೊತ್ತವನ್ನು ಕ್ರಮವಾಗಿ ಜುಲೈನಿಂದ ನೀಡುವುದಾಗಿ ಲಿಖಿತವಾಗಿ ಕೇಂದ್ರ ಆರ್ಥಿಕ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
2020ರ ಜನವರಿ 1, ಜುಲೈ 7 ಹಾಗೂ 2021ರ ಜನವರಿ 1ರಿಂದ ಮೂರು ಕಂತಿನಲ್ಲಿ ಬಿಡುಗಡೆ ಮಾಡಬೇಕಿದ್ದ ಹಣ ಕೋವಿಡ್ ಹಿನ್ನೆಲೆ ನೀಡಲು ಸಾಧ್ಯವಾಗಿಲ್ಲ. ಪ್ರಸ್ತುತ 37,530.08 ಕೋಟಿ ರೂಪಾಯಿ ಕೇಂದ್ರ ಸರ್ಕಾರಕ್ಕೆ ಉಳಿತಾಯವಾಗಿದೆ. ಹೀಗಾಗಿ, ಜುಲೈನಿಂದ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.