ಸುದ್ದಿ ಕಣಜ.ಕಾಂ
ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ಅಂತರ ನಿಗಮ ವರ್ಗಾವಣೆಗೆ ಇದುವರೆಗೆ ಅವಕಾಶವಿರಲಿಲ್ಲ. ಆದರೆ, ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವರ್ಗಾವಣೆಗೆ ಅವಕಾಶ ನೀಡಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಸಾರಿಗೆ ಸಿಬ್ಬಂದಿಯ ಬೇಡಿಕೆಗಳಿಗೆ ಸ್ಪಂದಿಸಿ, ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ 2016ರಲ್ಲಿ ಒಮ್ಮೆ ಮಾತ್ರ ನಿಗಮ ವರ್ಗಾವಣೆ ಕೈಗೊಳ್ಳಲಾಗಿತ್ತು. ಆದರೆ, ಅಂತರ ನಿಗಮ ವರ್ಗಾವಣೆ ಬಯಸಿ ಅನೇಕ ಸಿಬ್ಬಂದಿ ಬೇಡಿಕೆ ಇಟ್ಟಿರುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿವರ್ಷ ಈ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ಮಾರ್ಗಸೂಚಿ ಕೂಡ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಒಂದು ಬಾರಿಗೆ ಮಾತ್ರವಲ್ಲದೇ ಪ್ರತಿ ವರ್ಷ ಏಪ್ರಿಲ್ 1ರಿಂದ 30ರ ವರೆಗೆ ನಡೆಯುವಂತೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ನಿಗಮಗಳಿಂದಲೂ ಪ್ರತಿ ವರ್ಷ ಒಟ್ಟು ಸಿಬ್ಬಂದಿ ಪ್ರಮಾಣದ ಮೇಲೆ ಶೇ.2ರಷ್ಟು ಸಿಬ್ಬಂದಿಗೆ ವರ್ಗಾವಣೆಗೆ ಅವಕಾಶವಾಗುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ |ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ
- ವರ್ಗಾವಣೆ ಕೋರುವವರು ಕಾಯಂ ನೌಕರರಾಗಿರಬೇಕು. ಕನಿಷ್ಠ 10 ವರ್ಷ ಸೇವೆಯನ್ನು ಮಾತೃ ಸಂಸ್ಥೆಯಲ್ಲಿ ಸಲ್ಲಿಸಬೇಕು
- ಅರ್ಜಿಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಮಾತ್ರ ಪರಿಗಣಿಸತಕ್ಕದ್ದು
- ವರ್ಗಾವಣೆ ಬಯಸುವ ನೌಕರರು ಆನ್ ಲೈನ್ ಪೋರ್ಟಲ್ ತಂತ್ರಾಂಶದ ಮೂಲಕ ನಿಗದಿಪಡಿಸಿದ ಅರ್ಜಿ ನಮೂನೆ/ ಇಚ್ಛಾ ಪತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು
- ನೌಕರರು ಒಂದು ಸಲ ಶಾಶ್ವತವಾಗಿ ವರ್ಗಾವಣೆ ಪಡೆದ ನಂತರ ಯಾವುದೇ ಕಾರಣಕ್ಕೂ ವರ್ಗಾವಣೆ ಹಿಂಪಡೆಯುವ ಅಥವಾ ಬದಲಿಸುವ ಅವಕಾಶ ಇಲ್ಲ
- ನೌಕರರ ಮೇಲೆ ಶಿಸ್ತು ಪರಕರಣಗಳು ಬಾಕಿ ಇದ್ದಲ್ಲಿ ಅವರು ವರ್ಗಾವಣೆಗೆ ಅರ್ಹರಾಗುವುದಿಲ್ಲ
- ಹೈದರಾಬಾದ್ ಕರ್ನಾಟಕ ಸ್ಥಳೀಯ ಅಭ್ಯರ್ಥಿ ಎಂದು ಮೀಸಲಾತಿ ಬಯಸುವ ನೌಕರರು ಕಡ್ಡಾಯವಾಗಿ ಸಥಳೀಯ ಅಭ್ಯರ್ಥಿ ಎಂಬ ಬಗ್ಗೆ ಸೂಕ್ತ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.
- ಪ್ರತಿ ವೃಂದದಲ್ಲಿನ ಅಂತರ ನಿಗಮ ವರ್ಗಾವಣೆಯ ಶೇ.5ರಷ್ಟು ಹುದ್ದೆಗಳನ್ನು ಪತಿ, ಪತ್ನಿ ನೌಕರರಿಗೆ (ಇಬ್ಬರೂ ನಿಗಮದ ನೌಕರರಾಗಿರಬೇಕು) ಜೇಷ್ಠತೆಯ ಆಧಾರದ ಮೇಲೆ ಪರಿಗಣಿಸಲಾಗುವುದು.