ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೂರು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 118 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಸಾಗರದ ದೇವಿದಾಸ್ (39) ಹಿರಿಯಡಕದ ಉಮೇಶ್ (30), ರಂದಜಕಟ್ಟೆಯ ಗನೇಶ್ (40) ಎಂಬುವವರನ್ನು ತೀರ್ಥಹಳ್ಳಿ ಪೊಲೀಸರುಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಆರೋಪಿಗಳು ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ, ಭೀಮನಕಟ್ಟೆ, ಕುರವಳ್ಳಿ ಗ್ರಾಮಗಳಲ್ಲಿ ಕಳವು ಮಾಡಿದ್ದರು.
ಸಹಕಾರಿಯಾಯ್ತು ಮಹತ್ವದ ಸುಳಿವು | ಎರಡು ವರ್ಷಗಳಿಂದ ಕಳ್ಳರಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ, ಅವರು ತಲೆಮರೆಸಿಕೊಂಡಿದ್ದರಿಂದ ಸಿಕ್ಕಿರಲಿಲ್ಲ. ಮಹ್ವತದ ಸುಳಿವೊಂದು ಸಿಕ್ಕಿದ್ದು, ದಾಳಿ ಮಾಡಲಾಗಿ ಆರೋಪಿಗಳು ಅಲ್ಲಿದ್ದರು.
ಕಾರ್ಯಾಚರಣೆ | ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್.ಪಿ ಸಂತೋಷ್ ಮಾರ್ಗದರ್ಶನದಲ್ಲಿ ಸಿಪಿಐ ಪ್ರವೀಣ್ ನೀಲಮ್ಮನವರ್, ಸಂತೋಷ್ ಕುಮಾರ್ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಯಲ್ಲಪ್ಪ ಯರಗಣ್ಣನವರ್, ಸುಷ್ಮಾ, ಸಿಬ್ಬಂದಿ ಜಗದೀಶ್, ಸುರಕ್ಷಿತ್, ಜನಾರ್ಧನ್, ಕುಮಾರ್ ಅವರು ಕಾರ್ಯಾಚರಣೆ ನಡೆಸಿದರು.