ಸುದ್ದಿ ಕಣಜ.ಕಾಂ
ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ಕೋವಿಡ್ ಮತ್ತೆ ಉಲ್ಬಣಿಸುತ್ತಿದ್ದು, ರಾಜ್ಯದ ಹಲವೆಡೆ ಪ್ರಕರಣಗಳು ಪತ್ತೆಯಾಗುತ್ತಿವೆ. ಇದನ್ನೇ ಬಳಸಿಕೊಂಡು ಕಿಡಿಗೇಡಿಗಳು ನಕಲಿ ಆದೇಶದ ಪ್ರತಿಯೊಂದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದಾಗಿ, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪಾಲಕರು ಭಾರಿ ಗೊಂದಲಕ್ಕೀಡಾಗಿದ್ದಾರೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಸುತ್ತೋಲೆಯಲ್ಲಿ ಏನಿದೆ, ಗೊಂದಲಕ್ಕೇನು ಕಾರಣ | ಮಾರ್ಚ್ 15ರಿಂದ 30ರ ವರೆಗೆ ಕೋವಿಡ್ ಮುಂಜಾಗೃತಾ ಕ್ರಮವಾಗಿ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಜೆ ನೀಡಿರುವುದಾಗಿ ನಕಲಿ ಆದೇಶವೊಂದನ್ನು ಹರಿಬಿಡಲಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರ ಹಸ್ತಾಕ್ಷರವಿರುವ ಹಾಗೂ ಮಾರ್ಚ್ 14ರಂದೇ ಆದೇಶ ಮಾಡಿರುವ ದಿನಾಂಕ ಕೂಡ ಇದೆ. ಇದು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದಂತೆಯೇ ನಾನಾ ಕಡೆಗಳಿಂದ ಕಾಲೇಜು ವಿದ್ಯಾರ್ಥಿಗಳು ಪರಸ್ಪರ ಫೋನ್ ಮಾಡಿ ಮಾಹಿತಿ ಪಡೆಯಲು ಯತ್ನಿಸಿದರು. ಇತ್ತೀಚೆಗೆ ಪದವಿ ಕಾಲೇಜುಗಳು ಆರಂಭಗೊಂಡಿದ್ದು, ಮತ್ತೆ ರಜೆ ಘೋಷಣೆ ಮಾಡುತ್ತಾರೆಂಬ ಸುತ್ತೋಲೆಯೊಂದು ಜನರ ತಲೆ ಕೆಡಿಸಿತ್ತು.
‘ಸರ್ಕಾರದ ಹಳೆಯ ಆದೇಶದ ಪ್ರತಿಯನ್ನು ಎಡಿಟ್ ಮಾಡಿ ದಿನಾಂಕ ಬದಲಿಸಲಾಗಿದೆ. ವಿದ್ಯಾರ್ಥಿ, ಪೋಷಕರು ನಕಲಿ ಸುತ್ತೋಲೆಯ ಮಾಹಿತಿಯನ್ನು ನಂಬಬೇಡಿ’ ಎಂದು ತಿಳಿಸಿದ್ದಾರೆ.