ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರತಿಷ್ಠಿತ ಕಂಪೆನಿಯೊಂದರ ಹೆಸರು ಬಳಸಿ ಖದೀಮರು ಮಹಿಳೆಗೆ ಮೂರು ಲಕ್ಷ ರೂಪಾಯಿ ಟೋಪಿ ಹಾಕಿದ್ದಾರೆ.
ಶಿವಮೊಗ್ಗದ ನಗರ ನಿವಾಸಿ ವನಿತಾ ಎಂಬುವವರೇ ಮೋಸಕ್ಕೆ ಒಳಗಾದ ಮಹಿಳೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಧೋಖಾ ಆಗಿದ್ದು ಹೇಗೆ | ದೆಹಲಿಯಿಂದ ಪ್ರತಿಷ್ಠಿತ ಕಂಪೆನಿಯೊಂದರ ಹೆಸರಿನಲ್ಲಿ ಮಹಿಳೆಯ ವಿಳಾಸಕ್ಕೆ ಪತ್ರವೊಂದನ್ನು ಕಳುಹಿಸಿದ್ದಾರೆ. 12.50 ಲಕ್ಷ ರೂಪಾಯಿ ಬಹುಮಾನಕ್ಕೆ ಆಯ್ಕೆಯಾಗಿರುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ವನಿತಾ ಅವರು ಪತ್ರದ ಮೇಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಬಳಿಕ, ಬಹುಮಾನದ ಹಣ ಕಳುಹಿಸಬೇಕಾದರೆ ಅದಕ್ಕಾಗಿ ಕೆಲವು ಚಾರ್ಜ್ ಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
10 ದಿನ ಹಣ ವರ್ಗಾವಣೆ | ಮಾರ್ಚ್ 1ರಂದು ವನಿತಾ ಅವರ ವಿಳಾಸಕ್ಕೆ ಪತ್ರ ಬಂದಿದೆ. ಮಾರ್ಚ್ 10ರ ವರೆಗೆ ಹಂತ ಹಂತವಾಗಿ ದುಷ್ಕರ್ಮಿಗಳು ಸೂಚಿಸಿದ ಖಾತೆಗೆ ಒಟ್ಟು 3 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ್ದಾರೆ. ನಂತರ, ಮೋಸ ಹೋಗುತ್ತಿರುವುದಾಗಿ ಅನುಮಾನ ಬಂದು ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.