ಸುದ್ದಿ ಕಣಜ.ಕಾಂ
ಸಾಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಾವಿಗೆ ಬಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಭಾನುವಾರ ಸಂಭವಿಸಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಶ್ರೀಟಾಕೀಜ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾದವಾಗಿದ್ದ ನೀಲಮ್ಮ (65) ಎಂಬುವವರನ್ನು ರಕ್ಷಿಸಲಾಗಿದೆ. ನೀರು ಸೇದಲು ಹೋಗಿ ಕಾಲು ಜಾರಿ ನೀಲಮ್ಮ ಬಾವಿಗೆ ಬಿದ್ದಿದ್ದಾರೆ. ಶಬ್ದ ಕೇಳಿಬಂದಿದ್ದೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಶ್ರೀಧರನಗರದ ನಿವಾಸಿ ಬೀರಪ್ಪ (56) ಎಂಬುವವರು ನಲವತ್ತು ಅಡಿ ಆಳದ ಬಾವಿಗೆ ಬಿದ್ದಿದ್ದರು. ಸ್ಥಳೀಯರು ಮಾಹಿತಿ ನೀಡಿದ್ದೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.