ಸುದ್ದಿ ಕಣಜ.ಕಾಂ
ಶಿವಮೊಗ್ಗ: ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ 2 ರಿಂದ 4ರ ವರೆಗೆ ರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟ ಆಯೋಜನೆ ಸಮಿತಿಯ ಗೌರವಾಧ್ಯಕ್ಷ ಡಿ.ಎಸ್.ಅರುಣ್ ಹೇಳಿದರು.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಕೇರಂ ಫ್ರೆಂಡ್ಸ್ ಗ್ರೂಪ್, ಭಾರತ್ ಕೇರಂ ಅಕಾಡೆಮಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ದಿ.ಎಚ್.ವಿ.ರಂಗಸ್ವಾಮಿ ಅವರ ಸ್ಮರಣಾರ್ಥ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ ಕೇರಂ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಎಲ್ಲೆಲ್ಲಿಂದ ಭಾಗವಹಿಸಲಿದ್ದಾರೆ? | ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳಾ, ಕರ್ನಾಟಕ, ದೆಹಲಿ ಮತ್ತಿತರ ರಾಜ್ಯದ ಆಟಗಾರರು ಭಾಗವಹಿಸಲಿದ್ದಾರೆ. ಕೇರಂ ವಿಶ್ವ ಕಪ್ ವಿಜೇತ ಆರ್.ಎಂ.ಶಂಕರ್ ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ರ್ಯಾಂಕಿಂಗ್ ಹೊಂದಿರುವ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಷ್ಟು ತಂಡ ಭಾಗಿ? | ಶಿವಮೊಗ್ಗದಲ್ಲಿ ಇದೇ ಮೊದಲ ಸಲ ಅಖಿಲ ಭಾರತ ಮಟ್ಟದಲ್ಲಿ ಟೂರ್ನಿ ಏರ್ಪಡಿಸಲಾಗಿದೆ. 40 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. 350ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 36 ಟೇಬಲ್ ಅಳವಡಿಸಲಾಗಿದೆ. ಒಂದು ತಂಡದಲ್ಲಿ ಎಕ್ಸ್ಟಾ ್ರ ಆಟಗಾರ ಸೇರಿದಂತೆ 5 ಜನ ಇರಲಿದ್ದಾರೆ. ಒಂದು ತಂಡಕ್ಕೆ 2000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಬಹುಮಾನದ ವಿವರ | ಪ್ರಥಮ ಬಹುಮಾನ 50,000 ರೂಪಾಯಿ, ದ್ವಿತೀಯ ಬಹುಮಾನ 30,000 ರೂ. ಹಾಗೂ ತೃತೀಯ ಬಹುಮಾನ 20,000 ರೂ. ನೀಡಲಾಗುವುದು.
ಹಲವು ಗಣ್ಯರು ಭಾಗಿ | ಏಪ್ರಿಲ್ 3ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅನೇಕರು ಭಾಗವಹಿಸಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಕ್ರೀಡಾಕೂಟ ಆಯೋಜನೆ ಸಮಿತಿಯ ಉಪಾಧ್ಯಕ್ಷರಾದ ರಾಜು, ಹಾಲೇಶ್, ಸಿ.ರವಿ, ಕಾರ್ಯದರ್ಶಿ ಕೆ.ಎನ್.ಸುರೇಶ್, ಖಜಾಂಚಿ ಎಚ್.ಎಸ್.ಸತೀಶ್, ಎಸ್.ಪಿ.ದಿನೇಶ್ ಉಪಸ್ಥಿತರಿದ್ದರು.
https://www.suddikanaja.com/2021/02/03/casual-leave-for-treatment-of-cancer-to-government-employees/