ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆದಾಗಲೊಮ್ಮೆ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಶಕೆ ಆರಂಭವಾಗುತ್ತದೆಂ ಎಂಬುವುದು ಎಲ್ಲರ ನಿರೀಕ್ಷೆ. ಈಗ ಮತ್ತೊಮ್ಮೆ ಎಲ್ಲರ ಕಣ್ಣು ರಾಜ್ಯ ಸರ್ಕಾರ ಹಾಗೂ ಯಡಿಯೂರಪ್ಪ ಅವರ ಮೇಲಿದೆ. ಸಹಜವಾಗಿಯೇ ತಮ್ಮ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆ ಎಂದು ನಿರೀಕ್ಷೆ ಎಲ್ಲರಲ್ಲಿ ಮನೆ ಮಾಡಿದೆ. ಆದರೆ, ಅದಕ್ಕಾಗಿ, ಮಾರ್ಚ್ 8ರ ಮಧ್ಯಾಹ್ನದವರೆಗೆ ಕಾಯಲೇಬೇಕು.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಮಾರ್ಚ್ 8ರಂದು ಸಿಎಂ ಯಡಿಯೂರಪ್ಪ ಅವರು 2021-22ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಅದರಲ್ಲಿ ಶಿವಮೊಗ್ಗಕ್ಕೆ ಏನೇನು ಪ್ರಾಪ್ತವಾಗಲಿದೆ ಎಂಬುವುದು ಸದ್ಯ ಎಲ್ಲರ ಕೌತುಕವಾಗಿದೆ. ಸಾಕಷ್ಟು ಬೇಡಿಕೆಗಳಿದ್ದು, ಅವುಗಳನ್ನು ಸಿಎಂ ಬಜೆಟ್ ನಲ್ಲಿ ಸೇರಿಸಲಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಮೂಡಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಜನರ ಜೀವನ ಮಟ್ಟ ಸುಧಾರಣೆ ಸಂಬಂಧ ಯಾವ ಕ್ರಮವಹಿಸಲಿದ್ದಾರೆ ಎಂಬುವುದು ಕಾದು ನೋಡಬೇಕಿದೆ.
ಮಲೆನಾಡಿಗರ ಬೇಡಿಕೆಗಳೇನು?
- ಪಶು ವೈದ್ಯಕೀಯ, ಯೋಗ, ಆಯುಷ್ ವಿಶ್ವವಿದ್ಯಾಲಯಗಳಪನೆ
- ಟ್ರಕ್ ಟರ್ಮಿನಲ್, ಟಿಂಬರ್ ಯಾರ್ಡ್ ಸ್ಥಾಪನೆ
- ಶಿವಮೊಗ್ಗ- ಭದ್ರಾವತಿ ಪೊಲೀಸ್ ಕಮಿಷನರೇಟ್ ಘೋಷಣೆ
- ಕಲ್ಲೂರು ಮಂಡ್ಲಿ, ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತುಗಳ ಅಭಿವೃದ್ಧಿಗೆ ಅನುದಾನ ಮಂಜೂರು
- ಕಿಯೋನಿಕ್ಸ್ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಐಟಿ ಬಿಟಿ ವಿಸ್ತರಣೆ
- ಶಿವಮೊಗ್ಗ ನಗರದಲ್ಲಿಯ ವಿಮಾನ ನಿಲ್ದಾಣ ಗಮನದಲ್ಲಿಟ್ಟುಕೊಂಡು ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ
- ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ತಾಲೂಕು ರಚನೆಗೆ ಕ್ರಮ
- ಸೊರಬ ತಾಲೂಕಿನ ಆನವಟ್ಟಿ, ಭದ್ರಾವತಿಯ ಹೊಳೆಹೊನ್ನೂರು ತಾಲೂಕು ಕೇಂದ್ರಗಳಾಗಿ ಘೋಷಣೆ
- ಶಿವಮೊಗ್ಗದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ ಸ್ಥಾಪನೆ
- ಎರಡನೇ ಹಂತದ 200 ಅಡಿ ರಿಂಗ್ ರೋಡ್ ಯೋಜನೆಗೆ ಅನುಷ್ಠಾನಕ್ಕೆ ಸೂಕ್ತ ಕ್ರಮ
- ಎಂಪಿಎಂ ಉಳಿವಿಗೆ ವಿಶೇಷ ಪ್ಯಾಕೇಜ್ ಇನ್ನಿತರ ಕ್ರಮ
https://www.suddikanaja.com/2021/02/14/cm-yadiyurappa-bumper-contribution-to-home-constituency/