ಸುದ್ದಿ ಕಣಜ.ಕಾಂ
ಸಾಗರ: ರೈತನೊಬ್ಬನಿಗೆ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ರೈತನ ಖಾತೆಯಿಂದ 1.67 ಲಕ್ಷ ರೂಪಾಯಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಸಾಗರ ತಾಲೂಕಿನ ಆನಂದಪುರ ಬಳಿಯ ರೈತ ರಮೇಶ್(37) ಮೋಸ ಮಾಡಲಾಗಿದೆ.
ಆಗಿದ್ದೇನು, ಹಣ ಹೇಗೆ ವರ್ಗಾವಣೆ ಆಯ್ತು?
ಆನಂದಪುರದಲ್ಲಿ ರಮೇಶ್ ಅವರು ಕರೆಂಟ್ ಅಕೌಂಟ್ ಹೊಂದಿದ್ದಾರೆ. ಅದರಲ್ಲಿ 2 ಲಕ್ಷಕ್ಕೂ ಅಧಿಕ ಹಣ ಇಟ್ಟಿದ್ದರು. ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರು ರಮೇಶ್ ಅವರಿಗೆ ಕರೆ ಮಾಡಿದ್ದಾರೆ. 80 ಸಾವಿರ ರೂಪಾಯಿ ಡೆಪಾಸಿಟ್ ಮಾಡಿದರೆ ಎರಡು ವರ್ಷ ಬಿಟ್ಟು 1.40 ಲಕ್ಷ ರೂಪಾಯಿ ಬರುತ್ತವೆಂದು ತಿಳಿಸಿದ್ದಾರೆ. ಇದಕ್ಕೆ ರೈತ ಬೇಡ ಎಂದು ಹೇಳಿದ್ದಾನೆ.
ಡೆಪಾಸಿಟಿವ್ ಬೇಡ ಎಂದಾದ್ದಲ್ಲಿ ಮೊಬೈಲಿಗೆ ಕಳುಹಿದುವ ಒಟಿಪಿ ಹೇಳುವಂತೆ ಮಾಡಿದ್ದಾರೆ. ಅದರಂತೆ, ಒಟ್ಟು 7 ಒಟಿಪಿ ಕಳುಹಿಸಿದ್ದಾರೆ. ಆ ಎಲ್ಲ ಮಾಹಿತಿ ಮ್ಯಾನೇಜರ್ ಎಂದುಕೊಂಡು ಕರೆ ಮಾಡಿದವನಿಗೆ ರಮೇಶ್ ನೀಡಿದ್ದಾರೆ. ಸಂಜೆ ಹೊತ್ತಿಗೆ ಖಾತೆಯಿಂದ 1.67 ಲಕ್ಷ ರೂಪಾಯಿ ಖಾಲಿಯಾಗಿದೆ. ನಂತರ, ಯಾವ ನಂಬರಿನಿಂದ ಮ್ಯಾನೇಜರ್ ಎಂದು ಕರೆ ಮಾಡಿದ್ದರೋ ಅದಕ್ಕೆ ವಾಪಸ್ ಫೋನ್ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದೇ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
https://www.suddikanaja.com/2020/12/12/fraud-in-the-name-of-jan-dhan-scheme-in-bengaluru/