ಸುದ್ದಿಕಣಜ.ಕಾಂ
ಸಾಗರ: ಕೇಳಿದ ಔಷಧಿ ಇಲ್ಲ ಎಂದಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಾರ್ಗಲ್ ನಲ್ಲಿ ನಡೆದಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಕಾರ್ಗಲ್ ನ ಬಜಾರ್ ಲೈನಿನಲ್ಲಿರುವ ಮೆಡಿಕಲ್ ಶಾಪ್ ಮಾಲೀಕ ರಾಹುಲ್ ಎಂಬುವವರ ಮೇಲೆ ತೇಜಸ್ (25) ಎಂಬಾತ ಹಲ್ಲೆ ಮಾಡಿದ್ದಾನೆ.
ಉದ್ರಿಕ್ತನಾಗಿ ಹಲ್ಲೆ | ಗೋಪಿ ಮೆಡಿಕಲ್ಸ್ ಗೆ ಬಂದ ತೇಜಸ್ ಔಷಧವೊಂದರ ಬಗ್ಗೆ ವಿಚಾರಿಸಿದ್ದಾನೆ. ಆ ಔಷಧವಿಲ್ಲವೆಂದು ಹೇಳಿದ್ದಕ್ಕೆ ಉದ್ರಿಕ್ತನಾಗಿ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲಿಯೇ ಇದ್ದ ಆಟೋ ಚಾಲಕರು ಮೆಡಿಕಲ್ ಗೆ ನುಗ್ಗಿ ದಾಂಧಲೆ ಮಾಡಿದ್ದಾನೆ ಎನ್ನಲಾದ ತೇಜಸ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.