ಸುದ್ದಿ ಕಣಜ.ಕಾಂ
ಶಿವಮೊಗ್ಗ: ದುರ್ಗಿಗುಡಿಯ ಶ್ರೀ ದುರ್ಗಮ್ಮದೇವಿ ರಥೋತ್ಸವವು ಭಾನುವಾರ ಅತ್ಯಂತ ವಿಜೃಂಬಣೆಯಿಂದ ನಡೆಯಿತು. ಭಕ್ತಾದಿಗಳು ಶ್ರೀ ದುರ್ಗಮ್ಮದೇವಿಯ ದರ್ಶನ ಪಡೆದು, ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ಪುನಿತರಾದರು.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಭಾನುವಾರ ಮಧ್ಯಾಹ್ನದಿಂದಲೇ ರಥೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಭಾರಿ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ದುರ್ಗಿಗುಡಿ ರಸ್ತೆಯುದ್ದಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ದುರ್ಗಮ್ಮದೇವಿಯ ಜಾತ್ರೆ ಮತ್ತು ರಥೋತ್ಸವ ಬಳಿಕವೇ ಶಿವಮೊಗ್ಗದಲ್ಲಿ ಹೋಳಿ ಆಚರಿಸುವ ಪ್ರತೀತಿ ರೂಢಿಯಲ್ಲಿದೆ. ಸಂಪ್ರದಾಯದಂತೆ ವಿಶೇಷ, ಪೂಜೆ ಕೈಂಕರ್ಯಗಳ ನಡುವೆ ರಥೋತ್ಸವ ಜರುಗಿತು.
ಕೊರೊನಾ ನಡುವೆಯೂ ಕುಗ್ಗದ ಕಳೆ | ಕೊರೊನಾ ಎರಡನೇ ಅಲೆಯಿಂದಾಗಿ ಜನ ಭೀತಿಯಲ್ಲಿದ್ದಾರೆ. ಆದರೂ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿದರು.