ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಎಂ.ಆರ್.ಎಸ್. ವೃತ್ತದಲ್ಲಿ ಸೇನೆಯಲ್ಲಿ ಬಳಕೆಯಾದ ಯುದ್ಧ ವಿಮಾನ ಮತ್ತು ಟ್ಯಾಂಕರ್ ಅನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ, 3 ಲಕ್ಷ ರೂಪಾಯಿ ಅನುದಾನ ಮೀಸಲು ಇಡಲಾಗಿದೆ ಎಂದು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಹಾನಗರ ಪಾಲಿಕೆ ಬಜೆಟ್ ಮಂಡನೆ ಬಳಿಕ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ.ರಾಘವೇಂದ್ರ ಅವರು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರನ್ವಯ, ಯುದ್ಧ ವಿಮಾನ ಮತ್ತು ಟ್ಯಾಂಕರ್ ನೀಡುವ ಬಗ್ಗೆ ಗೃಹ ಸಚಿವರಿಂದ ಪತ್ರ ಬಂದಿದೆ ಎಂದರು.
ದೇಶಭಕ್ತಿಯ ಪ್ರತೀಕ | ಇದು ದೇಶ ಭಕ್ತಿಯ ಪ್ರತೀಕವಾಗಲಿದೆ. ಸೇನೆಯಲ್ಲಿ ಬಳಕೆಯಾದ ಟ್ಯಾಂಕರ್ ಮತ್ತು ಯುದ್ಧ ವಿಮಾನವನ್ನು ನೋಡುವುದೇ ಹೆಮ್ಮೆಯ ಸಂಗತಿಯಾಗಿದೆ. ಅದನ್ನು ನಮ್ಮ ನಗರದಲ್ಲಿ ಪ್ರತಿಷ್ಠಾಪಿಸುತ್ತಿದ್ದು, ಯುವಪೀಳಿಗೆಯಲ್ಲಿ ಇದು ದೇಶ ಭಕ್ತಿ ತುಂಬಲಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ್ ವಟಾರೆ, ಅನಿತಾ ರವಿಶಂಕರ್ ಉಪಸ್ಥಿತರಿದ್ದರು.
https://www.suddikanaja.com/2021/02/15/shivamogga-shikaripura-railway-land-acquisition-work-will-end-in-2-months/