ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಾಲೆ, ಕಾಲೇಜುಗಳಿಗೆ ಹೋಗಲು ಅಗತ್ಯವಿರುವ ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದ ಎಬಿವಿಪಿ ಕಾರ್ಯಕರ್ತರು, ಕೋವಿಡ್ 19 ಲಾಕ್ ಡೌನ್ ನಂತರ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಭಾರಿ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಖೇಲೊ ಇಂಡಿಯಾ ವಿಂಟರ್ ಗೇಮ್ಸ್, ಶಿವಮೊಗ್ಗದ ಇಬ್ಬರಿಗೆ ಚಿನ್ನದ ಪದಕ, ರಾಷ್ಟ್ರಮಟ್ಟದಲ್ಲಿ ಮಲೆನಾಡಿನ ಕೀರ್ತಿ ಎತ್ತಿಹಿಡಿದ ಪ್ರತಿಭೆಗಳು
ಶಿವಮೊಗ್ಗದಲ್ಲಿರುವ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳು ನಗರದಿಂದ ಹೊರಭಾಗದಲ್ಲಿವೆ. ಮಲ್ಲಿಗೇನಹಳ್ಳಿ (ವಾಜಪೇಯಿ ಬಡಾವಣೆ), ನವುಲೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೇ ಭಾರಿ ಕಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕುವೆಂಪು ವಿವಿಗೆ ಸರ್ಕಾರಿ ಬಸ್ ಬಿಡಿ | ಕುವೆಂಪು ವಿಶ್ವವಿದ್ಯಾಲಯಕ್ಕ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು. ಕೋವಿಡ್ ಬರುವುದಕ್ಕೂ ಮುಂಚೆ ಇದ್ದ ಬಸ್ ಸಂಚಾರವನ್ನು ಪುನರರಾಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಬಿವಿಪಿ ಮಹಾನಗರ ಕಾರ್ಯದರ್ಶಿ ಧನುಷ್ ಗೌಡ್, ಪದಾಧಿಕಾರಿಗಳಾದ ಶ್ರೀಪಾದ್, ದರ್ಶನ್, ಬಸವರಾಜ್, ನಿರಂಜನ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.