ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬ್ಯಾಂಕ್ ಗಳ ಖಾಸಗೀಕರಣವನ್ನು ಖಂಡಿಸಿ ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಶಿವಮೊಗ್ಗದಲ್ಲೂ ಸ್ಪಂದನೆ ವ್ಯಕ್ತವಾಗಿದೆ. ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
2021ರ ಬಜೆಟ್ ನಲ್ಲಿ ಘೋಷಿಸಿರುವಂತೆ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ. ಈ ಕ್ರಮವನ್ನು ಖಂಡಿಸಿ ಸೋಮವಾರ ಮತ್ತು ಮಂಗಳವಾರ ಎರಡು ದಿನ ಬ್ಯಾಂಕ್ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.
ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳೇನು?
- ಬ್ಯಾಂಕ್ ನೌಕರರು ಮುಷ್ಕರದಿಂದಾಗಿ ಕಾರ್ಯ ಕಲಾಪ ಸಂಪೂರ್ಣ ಸ್ಥಗಿತಗೊಂಡಿವೆ. ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಹಣ ಹಿಂಪಡೆಯುವದಕ್ಕೂ ಸಾಧ್ಯವಾಗುತ್ತಿಲ್ಲ.
- ಚೆಕ್ ಕ್ಲಿಯರೆನ್ಸ್ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯವಾಗಿದೆ
- ಎಟಿಎಂಗಳು ಹಣವಿಲ್ಲದೇ ಖಾಲಿ ಇವೆ. ಹೀಗಾಗಿ, ಎಮರ್ಜನ್ಸಿ ಸಂದರ್ಭದಲ್ಲಿ ಹಣವಿಲ್ಲದೇ ಗ್ರಾಹಕರು ಪರದಾಡುತ್ತಿದ್ದಾರೆ.
- ಮಂಗಳವಾರ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಈಗಾಗಲೇ ಎಟಿಎಂಗಳಿಂದ ಜನ ನಿರಂತರ ಹಣ ಪಡೆದಿದ್ದು, ಮೂರು ದಿನಗಳ ರಜೆಯಿಂದಾಗಿ ಹಣವಿಲ್ಲದೇ ಎಟಿಎಂ ಖಾಲಿ ಇವೆ.
ಎಟಿಎಂ ಖಾಲಿ ಖಾಲಿ | ನಗರದಲ್ಲಿರುವ ಎಟಿಎಂಗಳು ಖಾಲಿ ಖಾಲಿ ಇವೆ. ಡೆಪೋಸಿಟ್ ಮಾಡಬೇಕೆಂದರೂ ತಾಂತ್ರಿಕ ಸಮಸ್ಯೆ ಎದುರಾಗಿದೆ. ಎರಡನೇ ಶನಿವಾರ, ಭಾನುವಾರ ಇದ್ದುದ್ದರಿಂದ ಬ್ಯಾಂಕ್ ಗಳಿಗೆ ಎರಡು ದಿನ ರಜೆ ಇತ್ತು. ಸೋಮವಾರ ಮತ್ತು ಮಂಗಳವಾರ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಶಿವಮೊಗ್ಗದಲ್ಲಿರುವ ಬಹುತೇಕ ಎಲ್ಲ ಎಟಿಎಂಗಳು ಖಾಲಿ ಇವೆ. ಗ್ರಾಹಕರು ಹಣಕ್ಕಾಗಿ ಅಲೆದಾಡು ಸ್ಥಿತಿ ನಿರ್ಮಾಣವಾಗಿದೆ.
ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಶಿವಮೊಗ್ಗ ಕ್ಷೇತ್ರೀಯ ಕಾರ್ಯದರ್ಶಿ ನೆಲ್ಸನ್, ಸಹಾಯಕ ಕ್ಷೇತ್ರೀಯ ಕಾರ್ಯದರ್ಶಿ ಹೊನ್ನಪ್ಪ, ಶ್ರೀಧರ್, ಧೀರಜ್, ದೀಪ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.