ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಹು ನಿರೀಕ್ಷಿತ ‘ಯುವರತ್ನ’ ಚಿತ್ರ ಗುರುವಾರ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ ದೊರೆತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಬಿನಯಿಸಿರುವ ಚಿತ್ರ ಬಿಡುಗಡೆಗೆ ಕಾತುರದಿಂದ ಕಾದಿದ್ದ ಶಿವಮೊಗ್ಗ ಜನ ಗ್ರ್ಯಾಂಡ್ ಓಪನಿಂಗ್ ನೀಡಿದ್ದಾರೆ.
READ |ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಹೈಕಮಾಂಡ್ ಗೆ ಲೆಟರ್, ಮಾಡಿದ 6 ಗಂಭೀರ ಆರೋಪಗಳೇನು ಗೊತ್ತಾ?
ಚಿತ್ರ ಬಿಡುಗಡೆಯ ಮುನ್ನಾ ದಿನವಾದ ಬುಧವಾರ ರಾತ್ರಿಯಿಂದಲೇ ನಗರದ ಮಲ್ಲಿಕಾರ್ಜುನ ಚಿತ್ರಮಂದಿರ ಹತ್ತಿರ ಅಭಿಮಾನಿಗಳು ಜಮಾಯಿಸಿ ಸಂಭ್ರಮಾಚರಣೆ ವ್ಯಕ್ತಪಡಿಸಿದರು. ಪುನೀತ್ ಕಟೌಟ್ ಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ವಾದ್ಯ ಕಲಾ ತಂಡದೊಂದಿಗೆ ಕುಣಿದರು. ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲಾಯಿತು.
ದಾಖಲೆ ಪ್ರದರ್ಶನ | ಬೆಳ್ಳಂ ಬೆಳಗ್ಗೆಯೇ ಫ್ಯಾನ್ಸ್ ಷೋ ಆಯೋಜಿಸಲಾಗಿತ್ತು. ಥಿಯೇಟರಿಗೆ ಅಭಿಮಾನಿಗಳು ಆಗಮಿಸಿ ಚಿತ್ರ ವೀಕ್ಷಿಸಿದರು. ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡ ಚಿತ್ರ ದಾಖಲೆಯ ಪ್ರದರ್ಶನ ಕಾಣುತ್ತಿದೆ.