ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಶ್ರಯ ಯೋಜನೆ ಅಡಿ ನಿರ್ಮಿಸಿರುವ ಮಾದರಿ ಅಪಾರ್ಟ್ ಮೆಂಟಿನಲ್ಲಿರುವ ಮನೆಗೆ ದೇವರು ಮನೆಯೇ ಇಲ್ಲ! ಇಂತಹದ್ದೊಂದು ಬೇಡಿಕೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಯೊಬ್ಬರು ತಮ್ಮ ಗೊಂದಲವನ್ನು ತೋಡಿಕೊಂಡಿದ್ದಾರೆ.
READ | ಶೀಘ್ರವೇ ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆಗೆ ಅರ್ಜಿ ಆಹ್ವಾನ, ಗೋವಿಂದಾಪುರ ಮನೆ ಸಿಗುವುದು ಯಾವಾಗ?
ಮಾದರಿ ಮನೆ ವೀಕ್ಷಿಸುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಫಲಾನುಭವಿಗಳಿಗೆ ಪ್ರಶ್ನೆ, ಗೊಂದಲ ತೋಡಿಕೊಳ್ಳಲು ಅವಕಾಶ ನೀಡಿದ್ದರು. ಆಗ ಮಹಿಳೆಯೊಬ್ಬಳು ಆಶ್ರಯ ಮನೆಯಲ್ಲಿ ದೇವಸ್ಥಾನವೇ ಇಲ್ಲ ಎಂದು ಕ್ಯಾತೆ ತೆಗೆದರು.
ಅಹವಾಲು ಸ್ವೀಕರಿಸಿದ ಅವರು ಈ ಬಗ್ಗೆ ಗಮನ ಹರಿಸಲಾಗುವುದು. ಮನೆಯಲ್ಲಿ ದೇವರು ಮನೆ ಮಾಡುವುದಾಗಿ ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಎಸ್.ಎನ್.ಚನ್ನಬಸಪ್ಪ, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.