ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದ ಕುರಿತಾದ ದೋಷಾರೋಪಣೆ ಪಟ್ಟಿಯನ್ನು ಶೀಘ್ರವೇ ನ್ಯಾಯಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
READ | ಕೊರೊನಾ ಎರಡನೇ ಅಲೆ, ತ್ರಿ ಶತಕ ಬಾರಿಸಿದ ಸೋಂಕು
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾರ್ಜ್ ಶೀಟ್ ಸಲ್ಲಿಸಿದ ನಂತರ ಸ್ಫೋಟದ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಜತೆಗೆ ಸಾರ್ವಜನಿಕರಿಗೆ ಪೂರ್ಣ ಮಾಹಿತಿ ಪ್ರಾಪ್ತವಾಗಲಿದೆ ಎಂದು ಮಾಹಿತಿ ನೀಡಿದರು.
ಕಮಿಷ್ನರೇಟ್ ಸ್ಥಾಪನೆ ಸರ್ಕಾರ ಬಿಟ್ಟದ್ದು | ಶಿವಮೊಗ್ಗದಲ್ಲಿ ಕಮಿಷ್ನರೇಟ್ ಸ್ಥಾಪನೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸೂದ್, ಪೊಲೀಸ್ ಕಮಿಷ್ನರೇಟ್ ಸ್ಥಾಪಿಸಲು ಹತ್ತು ಲಕ್ಷ ಜನಸಂಖ್ಯೆ ಇರಬೇಕೆಂಬ ನಿಯಮವಿದೆ. ಶಿವಮೊಗ್ಗದಲ್ಲಿ ಕಮಿಷ್ನರೇಟ್ ಸ್ಥಾಪಿಸುವ ವಿಚಾರ ಸರಕಾರಕ್ಕೆ ಬಿಟ್ಟದ್ದು ಎಂದು ಹೇಳಿದರು.
ಟೀಕೆ ಟಿಪ್ಪಣಿ ಸಲ್ಲ | ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಯಾರೂ ಸಹ ಹೀಗೆ ತನಿಖೆ ನಡೆಸಬೇಕು ಎಂದು ಎಸ್.ಐ.ಟಿ ಬಗ್ಗೆ ಟಿಪ್ಪಣಿ ಮಾಡುವುದು ಸರಿಯಲ್ಲ. ತನಿಖೆ ಸರಿಯಾದ ದಾರಿಯಲ್ಲಿ ಸಾಗಿದೆ. ಕಾನೂನು ಚೌಕಟ್ಟಿನಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಎಸ್ಐಟಿ ತನಿಖೆಯ ಬಗ್ಗೆ ನ್ಯಾಯಾಲಯ ಮಾಹಿತಿ ಕೇಳಿತ್ತು. ಅದನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ ಎಂದರು.
https://www.suddikanaja.com/2021/04/05/gopishettikoppa-invites-you-to-apply-for-shelter-soon/