ಸುದ್ದಿ ಕಣಜ. ಕಾಂ
ಶಿವಮೊಗ್ಗ: ಏಪ್ರಿಲ್ 7ರಂದು ನಿಗದಿಯಾಗಿರುವ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಕಣ್ಣನ್ ಹೇಳಿದ್ದಾರೆ.
READ | ಏ.7ರಂದು ಕೆ.ಎಸ್.ಆರ್.ಟಿ.ಸಿ ಮುಷ್ಕರ, ಶಿವಮೊಗ್ಗದಿಂದ ಬಸ್ ಸಂಚಾರ ಇರಲಿದೆಯೇ?
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಎಸ್.ಆರ್.ಟಿಸಿ ನೌಕರರ ಮುಷ್ಕರ ಅನಿರ್ದಿಷ್ಟಾವಧಿಯದಾಗಿದ್ದು, ಮುಷ್ಕರ ಮುಂದುವರೆಯುವವರೆಗೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಾಗುವುದಿಲ್ಲ. ಇನ್ನು ಪರೀಕ್ಷೆಗಳನ್ನು ಮುಂದೂಡಬೇಕೆಂದು ಪದವಿ ಕಾಲೇಜುಗಳ ಯಾವುದೇ ಪ್ರಾಂಶುಪಾಲರಿಂದ ಮನವಿ ಕೂಡ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರದ ಪರಿಸ್ಥಿತಿಯ ಬಗ್ಗೆ ಕುಲಪತಿಗಳೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.