ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಅತ್ಯುತ್ತಮ ಯುವ ಮಂಡಳಿಯಾಗಿ ಹುಣಸೋಡಿನ ಸಂಸ್ಕೃತಿ ಕಲಾ ತಂಡವನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಮ್ಮ ಕಚೇರಿಯಲ್ಲಿ ಯುವ ಮಂಡಳಿಗೆ ಅಭಿನಂದಿಸಿ 25,000 ರೂಪಾಯಿ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.
READ | ಖಾಸಗಿ ಬಸ್ ಮಾಲೀಕ, ಪೊಲೀಸರ ನಡುವೆ ಬಿರುಸಿನ ಚಕಮಕಿ, ಕಾರಣವೇನು ಗೊತ್ತಾ?
ಕೇಂದ್ರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಶಿವಮೊಗ್ಗ ನೆಹರೂ ಯುವ ಕೇಂದ್ರ ವತಿಯಿಂದ 2019-20ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಯುವ ಮಂಡಳಿಗೆ 2020-21ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ನೀಡಲಾಗಿದೆ.
ಈ ವೇಳೆ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್, ಯುವ ಸಂಘದ ಅಧ್ಯಕ್ಷ ರಘುನಾಯ್ಕ್, ಸದಸ್ಯರಾದ ಲೋಹಿತ್, ಕಿರಣ್, ಸಂತೋಷ್, ನೆಹರೂ ಯುವ ಕೇಂದ್ರದ ಯುವ ಕಾರ್ಯಕರ್ತರಾದ ನವೀನ್, ಅನಿಲ್ ಉಪಸ್ಥಿತರಿದ್ದರು.