ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಹಿನ್ನೆಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಅದರಂತೆ, ಏಪ್ರಿಲ್ 9ರಿಂದ ಈ ರೈಲು ಸಂಚರಿಸಲಿದೆ.
READ | ಗಮನಿಸಿ ಏಪ್ರಿಲ್ 10ರಿಂದ ಈ ರೈಲಿನ ವೇಳೆ ಬದಲಾವಣೆ
ಯುಗಾದಿ ಹಬ್ಬವಿದ್ದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರಲು ಸಾಕಷ್ಟು ಜನ ದಟ್ಟಣೆ ಆಗುವುದನ್ನು ತಡೆಗಟ್ಟುವ ದೃಷ್ಟಿಕೋನದಿಂದ ಏಪ್ರಿಲ್ 9ರಂದು (ರೈಲು ಸಂಖ್ಯೆ 06511) ಯಶವಂತಪುರದಿಂದ ಹೊರಟು ರಾತ್ರಿ 11.45ಕ್ಕೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ. ಆ ದಿನ ಶಿವಮೊಗ್ಗದಲ್ಲಿಯೇ ನಿಲುಗಡೆ ಮಾಡಿ, ಏಪ್ರಿಲ್ 10ರಂದು ಬೆಳಗ್ಗೆ 9 ಗಂಟೆಗೆ (ರೈಲು ಸಂಖ್ಯೆ 06512) ಶಿವಮೊಗ್ಗದಿಂದ ಹೊರಟು ಸಂಜೆ 4.15ಕ್ಕೆ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ. ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಮುಗಿಯುವವರೆಗೆ ನಿರಂತರ ಈ ರೈಲ್ವೆ ಸಂಚಾರ ಇರಲಿದೆ.
ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಲಭ್ಯ | ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರೈಲಿನ ಸೌಲಭ್ಯ ಕಲ್ಪಿಸಲಾಗಿದೆ. ಈ ರೈಲಿಗೆ ಕೌಂಟರ್ ನಲ್ಲಿ ಲಭ್ಯ ಇರುವುದಿಲ್ಲ. ಹೀಗಾಗಿ, ಆನ್ ಲೈನ್ ನಲ್ಲೇ ಮುಂಚೆಯೇ ಟಿಕೆಟ್ ಕಾಯ್ದಿರಿಸಬೇಕಾಗಿರುತ್ತದೆ. ಜತೆಗೆ, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಪ್ರತಿಯೊಬ್ಬ ಪ್ರಯಾಣಿಕರು ಪಾಲಿಸಬೇಕೆಂದು ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
https://www.suddikanaja.com/2021/04/07/ksrtc-employees-strike-allowed-private-buses-for-operate-from-government-bus-stand/